ಟೀಂ ಇಂಡಿಯಾ ಆಟಗಾರರ ಕಾಲೆಳೆದ ವೀರೇಂದ್ರ ಸೆಹ್ವಾಗ್ !

kannada t-shirts

ಬೆಂಗಳೂರು, ಜನವರಿ 13, 2020 (www.justkannada.in): ವೀರೇಂದ್ರ ಸೆಹ್ವಾಗ್ ಟೀಂ ಇಂಡಿಯಾ ಆಟಗಾರರ ಕಾಲೆಳೆದಿದ್ದಾರೆ!

ಭಾರತ ತಂಡದ ಗಾಯಾಳುಗಳ ಪಟ್ಟಿ ನೋಡಿದ ವೀರು ನಾನು ನಿವೃತ್ತಿಯಿಂದ ಹೊರಬಂದು ಆಸ್ಟ್ರೇಲಿಯಾ ಪ್ರವಾಸಕ್ಕೆ ರೆಡಿ ಎಂದು ತಮಾಷೆ ಮಾಡಿದ್ದಾರೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ವೀರೇಂದ್ರ ಸೆಹ್ವಾಗ್ ಟೀಂ ಇಂಡಿಯಾದಲ್ಲಿ ಈಗ ಎಲ್ಲರೂ ಗಾಯಾಳುಗಳೇ. ಅಂತಿಮ ಟೆಸ್ಟ್ ಪಂದ್ಯಕ್ಕೆ ಆಡುವ ಬಳಗ ಹೊಂದಿಸುವುದೇ ತಲೆನೋವಿನ ವಿಚಾರ ಎಂದಿದ್ದಾರೆ.

ಆಸ್ಟ್ರೇಲಿಯಾಕ್ಕೆ ಹೋಗಲು ನಾನು ರೆಡಿ ಎಂಬ ಟ್ವೀಟ್ ಗೆ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ! ‘ವೀರೂ ಪಾಜಿ ನೀವು ಹೋದರೆ ಆಸ್ಟ್ರೇಲಿಯಾ ನಡುಗುವುದು ಗ್ಯಾರಂಟಿ ಎಂದಿದ್ದಾರೆ.

website developers in mysore