ಕೋರ್ಟ್ ಮೆಟ್ಟಿಲೇರಿದ ತಾಜ್ ಮಹಲ್ ವಿವಾದ: ಅರ್ಜಿದಾರನ ವಿರುದ್ಧ ಗರಂ: ವಿಚಾರಣೆ ಮಧ್ಯಾಹ್ನಕ್ಕೆ ಮುಂದೂಡಿಕೆ.

ಅಲಹಾಬಾದ್,ಮೇ,12,2022(www.justkannada.in): ಪ್ರೇಮಸೌಧವೆಂದೇ ಖ್ಯಾತಿ ಪಡೆದಿರುವ ಆಗ್ರಾದ ತಾಜ್‌ಮಹಲ್‌ ನಲ್ಲಿ ವಿವಾದ ಭುಗಿಲೆದ್ದಿದ್ದು,  ತಾಜ್‌ ಮಹಲ್‌ನಲ್ಲಿ ಹಲವು ವರ್ಷಗಳಿಂದ ಮುಚ್ಚಿರುವ ಕೊಠಡಿಗಳ ಬಾಗಿಲು ತೆರೆಯುವಂತೆ ಆಗ್ರಹಿಸಿ ಅಲಹಾಬಾದ್ ಹೈಕೋರ್ಟ್‌ ಗೆ ಬಿಜೆಪಿ ಮುಖಂಡ ಡಾ.ರಜನೀಶ್ ಸಿಂಗ್ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ.

ಈ ಮಧ್ಯೆ ಇಂದು ವಿಚಾರಣೆಗೆ ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ,  ವಿಚಾರಣೆಯನ್ನ ಮಧ್ಯಾಹ್ನ 2 ಗಂಟೆಗೆ ಮುಂದೂಡಿದೆ. ನಾಳೆಯೇ ತಾಜ್ ಮಹಲ್ ಕೊಠಡಿಗೆ ಹೋಗಲು ಅವಕಾಶ ಕೊಡಿ  ಎಂದು ಅರ್ಜಿದಾರ ಮನವಿ ಮಾಡಿದರು.Taj Mahal-bomb-Call-Intimidation 

ಈ ವೇಳೆ ಅರ್ಜಿದಾರನ ವಿರುದ್ಧ  ಗರಂ ಆದ ಕೋರ್ಟ್, ನಾಳೆಯೇ ನ್ಯಾಯಾಧೀಶರ ಕೊಠಡಿಗೆ ಹೋಗಬೇಕೆಂದ್ರೆ ಹೇಗೆ…? ನಿಮಗೆ ತಾಜ್ ಇತಿಹಾಸ ಗೊತ್ತಾಗಬೇಕಾ ಅಥವಾ ಮುಚ್ಚಿದ ಕೋಣೆಯೆಲ್ಲಿ ಏನಿದೆ ಅಂತಾ ತಿಳಿಯಬೇಕಾ..? ಇತಿಹಾಸ ತಿಳಿಯಬೇಕಾದರೇ ಸಂಶೋಧನೆ,ಪಿಎಚ್ ಡಿ ಮಾಡಿ.  ಸಾರ್ವಜನಿಕ ಹಿತಾಸಕ್ತಿ ಪದ್ಧತಿ ಅಪಹಾಸ್ಯ ಮಾಡಬೇಡಿ ಎಂದು ಕಿಡಿ ಕಾರಿತು.  ನಂತರ ವಿಚಾರಣೆಯನ್ನ ಕೋರ್ಟ್ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ ಮಾಡಿದೆ.

Key words: Taj Mahal-controversy –Alahabad –high court.