ಮಾಜಿ ಸಿಎಂ ಸಿದ್ಧರಾಮಯ್ಯ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಪತ್ರಕರ್ತರಿಗೆ ನಾಳೆ ಸ್ವಾಬ್ ಟೆಸ್ಟ್….

ಮೈಸೂರು,ಆ,4,2020(www.justkannada.in):  ಮಾಜಿ ಸಿಎಂ ಸಿದ್ಧರಾಮಯ್ಯಗೆ ಕೊರೋನಾ ಸೋಂಕು ದೃಢವಾದ ಹಿನ್ನೆಲೆ ಜುಲೈ 30 ರಂದು ಅವರ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಪತ್ರಕರ್ತರೂ ನಾಳೆ ಸ್ವಾಬ್ ಟೆಸ್ಟ್ ಮಾಡಿಸುವಂತೆ ಸೂಚನೆ ನೀಡಲಾಗಿದೆ.jk-logo-justkannada-logo

ಸಿದ್ದರಾಮಯ್ಯ ಅವರ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಿದ್ದವರು ನಾಳೆ(ಆ. 5) ತಪಾಸಣೆಗೆ ಒಳಗಾಗುವಂತೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಸೂಚನೆ ನೀಡಲಾಗಿದೆ. ಸಂವಾದ ವೇಳೆ ಹಾಜರಿದ್ದ  ಎಲ್ಲಾ ಪತ್ರಕರ್ತರು  ಛಾಯಾಗ್ರಾಹಕರು, ವಿಡಿಯೋ ಗ್ರಾಫರ್ಸ್ ಗಳು ಸ್ವಯಂ ಕ್ವಾರಂಟೈನ್ ಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ. ಹಾಗೆಯೇ ನಾಳೆ ಸ್ವಾಬ್ ಮಾಡಿಸಲು ನಿರ್ಧರಿಸಲಾಗಿದೆ.swab-test-tomorrow-journalists-participated-former-cm-siddaramaiah

ಇನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘವನ್ನ ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಿದ್ದು ಕಟ್ಟಡಕ್ಕೆ ಸ್ಯಾನಿಟೈಸ್ ಮಾಡಲಾಗಿದೆ.

Key words: Swab test -tomorrow – journalists – participated – former CM -Siddaramaiah