ಸುಮಲತಾ ಅಂಬರೀಶ್ ಗೆಲುವು ಹಿನ್ನೆಲೆ: ಮಂಡ್ಯ ಜನತೆಗೆ ಉಚಿತ ಊಟ ತಿಂಡಿ ನೀಡುವ ಮೂಲಕ ಬೀದಿ ಬದಿ ವ್ಯಾಪಾರಿಯಿಂದ ವಿನೂತನ ಅಭಿನಂದನೆ…

ಮೈಸೂರು,ಮೇ,28,2019(www.justkannada.in): ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ  ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ ಹಿನ್ನೆಲೆ. ಮೈಸೂರಿನಲ್ಲಿ ಬೀದಿ ಬದಿ ವ್ಯಾಪಾರಿ ಉಚಿತ ಊಟ ತಿಂಡಿ ನೀಡುವ ಮೂಲಕ ವಿನೂತನ ರೀತಿಯ ಅಭಿನಂದನೆ ಸಲ್ಲಿಸಿದ್ದಾರೆ.

ಮೈಸೂರಿನ ಕ್ಯಾಂಟೀನ್ ಮಾಲೀಕ ರಘು‌ ಎಂಬುವವರು ಈ ವಿನೂತನ ಕಾರ್ಯ ಮಾಡುತ್ತಿದ್ದಾರೆ. ಮಂಡ್ಯ ಸ್ವಾಭಿಮಾನಕ್ಕೆ ಮೈಸೂರಿನಲ್ಲಿ ಉಚಿತ ಊಟ ತಿಂಡಿ. ಮಂಡ್ಯದವರು ಎಂದರೆ ಸಾಕು ಉಚಿತವಾಗಿ ಊಟ ತಿಂಡಿ ನೀಡಿ ಎಂದು ಫಾಸ್ಟ್ ಪುಡ್ ಮಾಲೀಕ ರಘು ಸೂಚಿಸಿದ್ದಾರೆ.

ರಘು ರಸ್ತೆ ಬದಿ ಇಡ್ಲಿ ಕ್ಯಾಂಟೀನ್ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ರಘು ಅವರು, ಸುಮಲತಾ ಅಂಬರೀಷ್ ಅವರು ಗೆಲುವು ಸಾಧಿಸಿದ್ದಕ್ಕಾಗಿ ಮಂಡ್ಯ ಜನರ ಸ್ವಾಭಿಮಾನ‌ ಹೆಚ್ಚಾಗಿದೆ. ಗೆಲುವಿಗಿಂತ ಸ್ವಾಭಿಮಾನ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜನರ ಬಳಿ  ಹಣ ಪಡೆಯದೆ ಉಚಿತವಾಗಿ ಕ್ಯಾಂಟಿನ್ ಆಹಾರ ನೀಡುತ್ತೀದ್ದೇನೆ ಎಂದಿದ್ದಾರೆ.

ಮಂಡ್ಯ ಉಚ್ಚಾಟಿತ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಆಹಾರ ಸೇವಿಸಲು ಹೋದಾಗ ರಘು ಹಣ ಪಡೆಯಲು ನಿರಾಕರಿಸಿದರು. ರಘು ಅವರ ನಿರ್ಧಾರಕ್ಕೆ ಚಕಿತರಾದ ಸುಮಲತಾ ಆಪ್ತ ಸಚ್ಚಿದಾನಂದ ಈ ಬಗ್ಗೆ ವಿಚಾರಿಸಿ ನಂತರ ರಘು ಅವರಿಗೆ  ಶುಭಕೋರಿ ಮಂಡ್ಯ ಕಡೆಗೆ ಪ್ರಯಾಣ ಬೆಳೆಸಿದರು.

Key words: Sumalatha win background :free lunch to Mandya people in mysore

#mysore #mandya #sumalatha #freelunch