ಬೀದಿನಾಯಿಗಳ ದಾಳಿಗೆ ವೃದ್ಧೆ ಬಲಿ…

ಬೆಂಗಳೂರು,ಮೇ,,15,2021(www.justkannada.in): ಹಸಿದ ಬೀದಿನಾಯಿಗಳ ದಾಳಿಗೆ ವೃದ್ಧೆ ಬಲಿಯಾಗಿರುವ ಘಟನೆ  ಬೆಂಗಳೂರಿನಲ್ಲಿ ನಡೆದಿದೆ.jk

ಶಶಿಧರ್ ಲೇಔಟ್​​ನ ದ್ವಾರಕನಗರದಲ್ಲಿ ಈ ಘಟನೆ ನಡೆದಿದೆ. ದ್ವಾರಕನಗರದ ರಸ್ತೆ ಬದಿಯಲ್ಲಿ ಮಲಗಿದ್ದ ವೃದ್ಧೆ ಮೇಲೆ ರಾತ್ರಿ ಏಳೆಂಟು ಬೀದಿ ನಾಯಿಗಳು ದಾಳಿ ಮಾಡಿದ್ದವು. ಕೂಡಲೇ ಅಲ್ಲಿದ್ದ ಸಾರ್ವಜನಿಕರು ನಾಯಿಗಳನ್ನು ಓಡಿಸಿ ವೃದ್ಧೆಯನ್ನು ರಕ್ಷಿಸಿದ್ದಾರೆ.street-attack-attack-death-old-age-bangalore

ಆದರೆ ಹೊಂಚು ಹಾಕಿ ಕುಳಿತ ಬೀದಿ ನಾಯಿಗಳು ತಡರಾತ್ರಿ ಮತ್ತೆ ವೃದ್ಧೆ ಮೇಲೆ ಹಲ್ಲೆ ಮಾಡಿ ಆಕೆಯನ್ನು ಏಳೆದೋಯ್ದು,  ಕಚ್ಚಿ ಸಾಯಿಸಿವೆ. ವೃದ್ಧೆ ಮುಖ ಹಾಗೂ ಕಾಲು ಭಾಗಗಳನ್ನು ನಾಯಿಗಳು ಸಂಪೂರ್ಣ ಕಚ್ಚಿ ತಿಂದು ಹಾಕಿದೆ ಎನ್ನಲಾಗಿದೆ.

Key words: street attack-attack-death- Old age- bangalore