ವಿಷ್ಣುವರ್ಧನ್ ಪ್ರತಿಮೆ ಧ್ವಂಸ : ಮೈಸೂರಿನಲ್ಲಿ ವಿಷ್ಣು ಅಭಿಮಾನಿಗಳಿಂದ ಪ್ರತಿಭಟನೆ

ಮೈಸೂರು,ಡಿಸೆಂಬರ್,26,2020(www.justkannada.in) :  ಬೆಂಗಳೂರಿನಲ್ಲಿ ನಟ ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವoಸ ಹಿನ್ನೆಲೆ ಮೈಸೂರಿನಲ್ಲಿ ವಿಷ್ಣು ಅಭಿಮಾನಿಗಳಿಂದ ಪ್ರತಿಭಟನೆ ನಡೆಸಲಾಯಿತು.Teachers,solve,problems,Government,bound,Minister,R.Ashokನಗರದ ಜಗನ್ಮೋಹನ ಅರಮನೆ ಮುಂಭಾಗ ಕಿಡಿಗೇಡಿಗಳ ವಿರುದ್ಧ ಘೋಷಣೆ ಕೂಗಿ ವಿಷ್ಣು ಅಭಿಮಾನಿಗಳು ಆಕ್ರೋಶವ್ಯಕ್ತಪಡಿಸಿದರು.

ವಿಷ್ಣುವರ್ಧನ್ ಅಭಿಮಾನಿ ಪಾರ್ಥಸಾರಥಿ ಮಾತನಾಡಿ, ಪದೇ ಪದೇ ವಿಷ್ಣುವರ್ಧನ್ ವಿಚಾರದಲ್ಲಿ ನೋವುಂಟು ಮಾಡುತ್ತಿರುವುದು ಸರಿಯಲ್ಲ. ಪುತ್ಥಳಿ ಸ್ಥಳಾಂತರಿಸಬಹುದಿತ್ತು ಬದಲಾಗಿ ಈ ರೀತಿಯ ಕೃತ್ಯ ಎಸಗಬಾರದಿತ್ತು ಎಂದು ಕಿಡಿಕಾರಿದ್ದಾರೆ.Statue,Lord,Vishnu,Vardhan,Protest,Vishnu,fans,Mysoreಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿಷ್ಣು ಪುತ್ಥಳಿಗಳಿಗೆ ಭದ್ರತೆ ಕೊಡಬೇಕು. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿಷ್ಣು ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಬೇಕು. ವಿಷ್ಣು ಪ್ರತಿಮೆಗೆ ರಕ್ಷಣೆ ನೀಡಿ ಈ ರೀತಿಯ ಕೃತ್ಯಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

key words : Statue-Lord-Vishnu-Vardhan-Protest-Vishnu-fans-Mysore