ಹಿಂದೂ ಪದದ ಬಗ್ಗೆ ಹೇಳಿಕೆ ವಿಚಾರ: ಕ್ಷಮೆಯಾಚಿಸುವಂತೆ ಸತೀಶ್ ಜಾರಕಿಹೊಳಿಗೆ ಮಾಜಿ ಸಿಎಂ ಬಿಎಸ್ ವೈ ಆಗ್ರಹ.

kannada t-shirts

ಬೆಂಗಳೂರು,ನವೆಂಬರ್,9,2022(www.justkannada.in):  ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕ್ಷಮೆಯಾಚಿಸುವಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಗ್ರಹಿಸಿದರು.

ಈ ಕುರಿತು ಇಂದು ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಹಿಂದೂಗಳಿಗೆ ಅಪಮಾನ ಮಾಡುವಂತಹ ಹೇಳಿಕೆ ನೀಡಿದ್ದಾರೆ. ಸತೀಶ್ ಗೆ ಕ್ಷಮೆ ಕೇಳುವಂತೆ ಒತ್ತಾಯ ಮಾಡುತ್ತೇನೆ.  ಸತೀಶ್ ಜಾರಕಿಹೊಳಿ  ಹೇಳಿಕೆ ಅಕ್ಷಮ್ಯ ಅಪರಾಧ.  ಹಿಂದೂಗಳಗೆ ಅಪಮಾನ ಮಾಡುವ ಹೇಳಿಕೆ ಸರಿಯಲ್ಲ. ಸತೀಶ್  ಕ್ಷಮೆ ಕೇಳಲಿ ಎಂದು ಒತ್ತಾಯಿಸಿದರು.prime-minister-narendra-modi-cm-bs-yeddyurappa-praised-central-government

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿವೈ ವಿಜಯೇಂದ್ರ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿಎಸ್ ಯಡಿಯೂರಪ್ಪ, ಶಿಕಾರಿಪುರದಿಂದ ಸ್ಪರ್ಧೆ ಬಗ್ಗೆ ಹೇಳಿದ್ದೇನೆ.  ದೆಹಲಿಯವರು ಏನು ಹೇಳುತ್ತಾರೆ ನೋಡೋಣಾ ಎಂದರು.

Key words: Statement – word –Hindu-former CM- BS Yeddyurappa- demands -apology -Satish Jarakiholi.

website developers in mysore