ರಾಜ್ಯ ಕಣ್ಣೀರು ಹಾಕುವ, ಕಣ್ಣೀರು ಬರಿಸುವ, ಕಣ್ಣೀರು ಒರೆಸುವ ಮೂರ ರೀತಿಯ ಸಿಎಂ ಕಂಡಿದೆ- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್..

ತುಮಕೂರು,ಅಕ್ಟೋಬರ್,28,2020(www.justkannada.in): ರಾಜ್ಯ ಕಣ್ಣೀರು ಹಾಕುವ, ಕಣ್ಣೀರು ಬರಿಸುವ, ಕಣ್ಣೀರು ಒರೆಸುವ ಮೂರ ರೀತಿಯ ಸಿಎಂ ಕಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದರು.jk-logo-justkannada-logo

ಶಿರಾಕ್ಷೇತ್ರದ ಪ್ರಚಾರ ಸಭೆಯಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಕಣ್ಣೀರು ಬರಿಸುವ ಸಿಎಂ ಅಂದ್ರೆ ಸಿದ್ಧರಾಮಯ್ಯ, ಕಣ್ಣೀರು ಹಾಕುವ ಸಿಎಂ ಅಂದ್ರೆ ಅದು ಹೆಚ್.ಡಿ ಕುಮಾರಸ್ವಾಮಿ, ಕಣ್ಣೀರು ಒರೆಸುವ ಸಿಎಂ ಅಂದ್ರೆ ಅದು ಸಿಎಂ ಬಿಎಸ್ ಯಡಿಯೂರಪ್ಪ ಎಂದು ವಿವರಿಸಿದರು.state-three-types-tearing-bjp-president-nalin-kumar-katil-tumakur-shira

ಶಿರಾ ಗೆಲ್ಲಲು ಪಂಚ ಪಾಂಡವರ ಟೀಂ:

ಶಿರಾ ಉಪಚುನಾವಣೆ ಗೆಲ್ಲಲು ಬಿಜೆಪಿ ಪಂಚ ಪಾಂಡವರ ಟೀಮ್ ಕೆಲಸ ಮಾಡುತ್ತಿದೆ. ಧರ್ಮರಾಯನಾಗಿ ಸುರೇಶ್ ಕುಮಾರ್, ವಿಜಯೇಂದ್ರ ಅರ್ಜುನ, ಪ್ರತಾಪ್ ಸಿಂಹ ಭೀಮ,  ಗೋವಿಂದ ಕಾರಜೋಳ ಸಾರಥಿಯಾಗಿದ್ದಾರೆ. ಇನ್ನು ರವಿಕುಮಾರ್ , ನಾರಾಯಣಸ್ವಾಮಿ ನಕುಲ ಸಹದೇವರಾಗಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ಬಣ್ಣಿಸಿದರು.

Key words:  state -three types – tearing-  BJP President -Nalin Kumar Katil –tumakur-shira