ಸೊಸೆಗೆ ಚಾಕುವಿನಿಂದ ಚುಚ್ಚಿ ನಂತರ ಅತ್ತೆ ಆತ್ಮಹತ್ಯೆಗೆ ಶರಣು.

kannada t-shirts

ಮೈಸೂರು,ಸೆಪ್ಟಂಬರ್,29,2021(www.justkannada.in):  ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ  ಸೊಸೆಗೆ ಚಾಕುವಿನಿಂದ ಚುಚ್ಚಿದ ಅತ್ತೆ ನಂತರ ಹೆದರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಬೋಗಾದಿಯಲ್ಲಿ ಈ ಘಟನೆ ನಡೆದಿದೆ. ನಿವೃತ್ತ ಶಿಕ್ಷಕಿ ಮಾದೇವಿ (62) ಆತ್ಮಹತ್ಯೆಗೆ ಶರಣಾದವರು. ಅತ್ತೆ ಮಾದೇವಿ ಮಹಡಿ ಮನೆಯಲ್ಲಿ ಕೆಳಗಡೆ ವಾಸವಿದ್ದರು. ಮೇಲಿನ ಮಹಡಿ ಮನೆಯಲ್ಲಿ ಮಗ-ಸೊಸೆ ವೇದಾವತಿ ವಾಸವಿದ್ದರು. ಈ ನಡುವೆ ಕ್ಷುಲ್ಲಕ ಕಾರಣಕ್ಕೆ ಅತ್ತೆ ಸೊಸೆ ನಡುವೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಮಾದೇವಿ ಸೊಸೆ ವೇದಾವತಿಗೆ ಚಾಕುವಿನಿಂದ ಚುಚ್ಚಿದ್ದಾರೆ.bangalore-stabbed-knife-death-arrest

ಈ ವೇಳೆ ಸೊಸೆ ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಸೇರಿದ್ದರು. ಗಾಯಗೊಂಡ ವೇದಾವತಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೊಸೆಯನ್ನ ಆಸ್ಪತ್ರೆಗೆ ಕರೆದೊಯ್ದ ವೇಳೆ ಅತ್ತೆ ಮಾದೇವಿ ಚಾಕು ಚುಚ್ಚಿದ ವಿಚಾರ ಎಲ್ಲರಿಗೂ ತಿಳಿಯಿತೆಂದು ಅಂಜಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  stabs – knife – surrenders – suicide-mysore

website developers in mysore