ರಕ್ತದ ಮಾದರಿ ಪರೀಕ್ಷಿಸಲು 6 ಕಡೆ ಲ್ಯಾಬ್: ಕೊರೋನಾ ಸೋಂಕಿತರ ಆರೋಗ್ಯ ಸ್ಥಿರ- ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ..

kannada t-shirts

ಬೆಂಗಳೂರು,ಮಾ,10,2020(www.justkannada.in):  ನಾಲ್ವರು ಕೊರೋನಾ  ಸೋಂಕಿತರ ಆರೋಗ್ಯ ಸ್ಥಿರವಾಗಿದೆ. ನಾಲ್ವರಿಗೂ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದರು.

ಬೆಂಗಳೂರಿನಲ್ಲಿ ನಾಲ್ವರಲ್ಲಿ ಕೊರೋನಾ ಸೋಂಕು ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಅಮೆರಿಕದಿಂದ ಬೆಂಗಳೂರಿಗೆ ವಾಪಾಸ್ಸಾಗಿದ್ದ ಟೆಕ್ಕಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆತನ ಪತ್ನಿ, ಪುತ್ರಿ ಹಾಗೂ ಸ್ನೇಹಿತನಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಟೆಕ್ಕಿ ತಂಗಿದ್ದ ಅಪಾರ್ಟ್ ಮೆಂಟ್ ನಲ್ಲಿದ್ದ 160 ಜನರ ತಪಾಸಣೆ ಮಾಡಲಾಗಿದೆ.  ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.

ಇನ್ನು ಕೊರೋನಾವೈರಸ್ ಬಗ್ಗೆ ಇಂದಿನಿಂದ ಎರಡು ಹೆಲ್ತ್ ಬುಲೆಟಿನ್ ಕೊಡುತ್ತಿದ್ದೇವೆ.  ರಕ್ತದ ಮಾದರಿ ಪರೀಕ್ಷಿಸಲು 6 ಕಡೆ ಲ್ಯಾಬ್ ಗಳನ್ನ ತೆರೆಯಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words:  Stability – corona –infected- health-Medical Education Minister- Dr K Sudhakar- clarified.

website developers in mysore