ದೇಶಿ ಕ್ರಿಕೆಟ್’ನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದ ಶ್ರೀಶಾಂತ್

ಬೆಂಗಳೂರು, ಫೆಬ್ರವರಿ 23, 2021 (www.justkannada.in):

ಟೀಂ ಇಂಡಿಯಾ ಮಾಜಿ ವೇಗಿ ಶ್ರೀಶಾಂತ್‌ ದೇಶಿ ಕ್ರಿಕೆಟ್ ಗೆ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದ್ದಾರೆ.

ಉತ್ತರ ಪ್ರದೇಶದ ವಿರುದ್ಧ ವಿಜಯ್‌ ಹಜಾರೆ ಟ್ರೋಫಿಯ ಪಂದ್ಯದಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಕೇರಳ ಗೆಲುವಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ.

ಐಪಿಎಲ್‌ 2021ರ ಹರಾಜಿನಲ್ಲಿ ಸ್ಥಾನ ಪಡೆಯಲು ವಿಫಲವಾದ ಶ್ರೀಶಾಂತ್‌, ಎಂಟು ವರ್ಷಗಳ ಬಳಿಕ ತಾವಾಡಿದ ಮೊದಲ ಲಿಸ್ಟ್‌ ಎ ಪಂದ್ಯದಲ್ಲಿ 65 ರನ್ನಿತ್ತು 5 ವಿಕೆಟ್ ಪಡೆದಿದ್ದಾರೆ.

ಅಂದಹಾಗೆ ಸ್ಪಾಟ್‌ ಫಿಕ್ಸಿಂಗ್ ವಿರುದ್ಧ ತಮ್ಮ ಮೇಲೆ ವಿಧಿಸಲಾಗಿದ್ದ ಜೀವಾವಧಿ ನಿಷೇಧದ ವಿರುದ್ಧ ಕೋರ್ಟ್‌ನಲ್ಲಿ ಹೋರಾಡಿ ಶ್ರೀಶಾಂತ್ ಗೆದ್ದಿದ್ದರು.