ಖ್ಯಾತ ಚಿತ್ರಸಾಹಿತಿ, ಗೀತ ರಚನೆಕಾರ ತಂಗಾಳಿ ನಾಗರಾಜ್ ಇನ್ನಿಲ್ಲ…

kannada t-shirts

 

ಬೆಂಗಳೂರು,ಸೆಪ್ಟಂಬರ್,12,2020(www.justkannada.in):  ಸ್ಯಾಂಡಲ್ ವುಡ್ ನ ಖ್ಯಾತ ಚಿತ್ರಸಾಹಿತಿ, ಗೀತ ರಚನೆಕಾರ ತಂಗಾಳಿ ನಾಗರಾಜ್  ಇಂದು ಹೃದಯಾಘಾತದಿಂದ  ಮೃತಪಟ್ಟಿದ್ದಾರೆ.

ಕಳೆದ ಹದಿನೈದು ವರ್ಷಗಳಿಂದಲೂ ತಂಗಾಳಿ ನಾಗರಾಜ್ ಕನ್ನಡ ಸಿನಿಮಾಗಳಲ್ಲಿ ಗೀತರಚನೆಕಾರರಾಗಿ ಕೆಲಸ ಮಾಡುತ್ತಿದ್ದು, ನೂರಾರು ಹಿಟ್ ಹಾಡುಗಳನ್ನು ಬರೆದಿದ್ದಾರೆ. ‘ತಂಗಾಳಿ ಎಲ್ಲಿಂದ ಬೀಸುವೆ’ ಹಾಡು ಬರೆದು ಖ್ಯಾತರಾದ ನಾಗರಾಜ್ ಆ ನಂತರ ತಂಗಾಳಿ ನಾಗರಾಜ್ ಎಂದೇ ಪರಿಚಿತರಾದರು. ಕಲಾಸಿಪಾಳ್ಯದ ‘ಧೂಳ್ ಮಗಾ ಧೂಳ್’ ಹಾಡು ಸೇರಿ ಹಲವು ಹಿಟ್‌ ಗಳನ್ನು ತಂಗಾಳಿ ನಾಗರಾಜ್ ಬರೆದಿದ್ದಾರೆ.

songwriter thangali Nagaraj is no more.

website developers in mysore