ಸಂಧಿ ಪಾಠ ಮಾಡ್ತಾರೆ: ಅವರಿಗೆ ಏಕ ವಚನ, ಬಹುವಚನ ಗೊತ್ತಿಲ್ವೆ…?- ಸಿದ್ದರಾಮಯ್ಯ ವಿರುದ್ದ ಹೆಚ್.ವಿಶ್ವನಾಥ್ ಕಿಡಿ…

kannada t-shirts

ಬೆಂಗಳೂರು,ಜು,4,2019(www.justkannada.in):  ತಮ್ಮ ವಿರುದ್ದ ಏಕವಚನದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿರುವ ಜೆಡಿಎಸ್ ಶಾಸಕ ಹೆಚ್.ವಿಶ್ವನಾಥ್ , ಸಿದ್ದರಾಮಯ್ಯ ಸಂಧಿ ಪಾಠ ಮಾಡುತ್ತಾರೆ. ಅವರಿಗೆ ಏಕವಚನ, ಬಹುವಚನ ಗೊತ್ತಿಲ್ವಾ ಎಂದು ಪ್ರಶ್ನಿಸಿದ್ದಾರೆ.

 ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಹೆಚ್.ವಿಶ್ವನಾಥ್, ಸಿದ್ದರಾಮಯ್ಯನವರ ಸಂಸ್ಕೃತಿಯೇ ಅಷ್ಟು. ಅವರಿಗೆ ಬಹುವಚನದಲ್ಲಿ ಮಾತನಾಡೋದೇ ಗೊತ್ತಿಲ್ಲ. ಎಲ್ಲರಿಗೂ ಸಂಧಿ ಪಾಠ ಮಾಡುತ್ತಾರೆ. ಅವರಿಗೆ ಏಕವಚನ, ಬಹು ವಚನದ ಬಗ್ಗೆ ಮಾತನಾಡುವುದು ಗೊತ್ತಿಲ್ವ. ಅವರು ಏಕವಚನದಲ್ಲಿ ನಿಂದಿಸಿದರೆ ನನಗೆ  ಬೇಜಾರಿಲ್ಲ ಎಂದು ಹೇಳಿದರು.

 ಸಮನಯ್ವ ಸಮಿತಿಯಲ್ಲಿ ಎರಡು ಪಕ್ಷಗಳ ಅಧ್ಯಕ್ಷರು ಬಾರದಂತೆ ಸಿದ್ದರಾಮಯ್ಯ ಅವರು ತಡೆದರು. ಇನ್ನು ಹೊಸದಾಗಿ ನೇಮಕವಾಗಿರುವ ಜೆಡಿಎಸ್‌ ಅಧ್ಯಕ್ಷರಿಗೆ ಸಮನ್ವಯ ಸಮಿತಿಯಲ್ಲಿ ಅವಕಾಶ ನೀಡಬೇಕು  ಎಂದು ಹೆಚ್.ವಿಶ್ವನಾಥ್ ಆಗ್ರಹಿಸಿದರು.

ಇಂದು ಬೆಳಿಗ್ಗೆ ಮೈಸೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ನೆಟ್ಟಗೆ ಆರು ತಿಂಗಳು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನಿರ್ವಹಣೆ ಮಾಡಲು ಆಗಲಿಲ್ಲ. ಅವನೇನ್ರಿ ಮಾತನಾಡೋದು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದರು.

Key words: single word- plural- H.Vishwanath -against -Siddaramaiah.

website developers in mysore