ಕಣ್ಣಲ್ಲಿ ನೀರು ತರಿಸುವ ಎಲ್.ಎನ್.ಶಾಸ್ತ್ರಿ ಕೊನೆಯ ಹಾಡು !

ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ಗಾಯಕ ಎಲ್ ಶಾಸ್ತ್ರಿ ಕಂಪೋಸ್​ ಮಾಡಿ ಹಾಡಿರುವ ಕಟ್ಟ ಕಡೆಯ ಹಾಡು ಬಿಡುಗಡೆಯಾಗಿದೆ.

ಎಲ್​. ಎನ್​ ಶಾಸ್ತ್ರಿ ತಮ್ಮ ಕೊನೆ ದಿನಗಳಲ್ಲಿ ನೀರು ತುಂಬಿದ ನೋವಿನ ಹೊಟ್ಟೆಯನ್ನು ಹೊತ್ತುಕೊಂಡೇ ಸ್ಟುಡಿಯೋಗೆ ಬಂದು ಈ ಹಾಡನ್ನ ಕಂಪೋಸ್​ ಮಾಡಿ ಹಾಡಿದ್ದರು.

ತಮ್ಮದೇ ನೋವಿನ ಕಥೆ ಹೇಳುವಂತಿದ್ದ ಹಾಡು, ನಿಜಕ್ಕೂ ಎಂಥವರನ್ನೂ ಕಾಡದೇ ಇರಲ್ಲ. ಆ ಹಾಡಿನ ಲಿರಿಕಲ್​ ವೀಡಿಯೋ ಇದೀಗ ರಿಲೀಸ್​ ಆಗಿದೆ. ಮೇಲೊಬ್ಬ ಮೇದಾವಿ ಚಿತ್ರದ ಹಾಡು ಎಲ್ಲರ ಮನ ಸೆಳೆಯುತ್ತಿದೆ.