ವೈಯಕ್ತಿಕ ತೆವಲಿಗೆ ಸಿದ್ದರಾಮೋತ್ಸವ ಮಾಡುತ್ತಿಲ್ಲ- ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ.

ಮೈಸೂರು,ಜುಲೈ,20,2022(www.justkannada.in): ವೈಯಕ್ತಿಕ ತೆವಲಿಗೆ ಸಿದ್ದರಾಮೋತ್ಸವ ಮಾಡುತ್ತಿಲ್ಲ. ಪಕ್ಷಕ್ಕೆ ಮುಜುಗರ ಆಗದಂತೆ ಪಕ್ಷದ ಗಮನಕ್ಕೆ ತಂದು ಆಚರಣೆ ಮಾಡುತ್ತಿದ್ದೇವೆ ಎಂದು ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಸಿದ್ದರಾಮೋತ್ಸವ ಸಮಾವೇಶದ  ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ  ಡಾ. ಹೆಚ್ ಸಿ ಮಹದೇವಪ್ಪ, ಸಿದ್ದರಾಮಯ್ಯ ಅಭಿಮಾನಿಗಳು ಹಿತೈಷಿಗಳು ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಣೆ ಮಾಡಬೇಕೆಂದು ಕೇಳುತ್ತಿದ್ದರು. ಆದರೂ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಸಿದ್ದರಾಮಯ್ಯ ಆಪ್ತರುಗಳು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ 75ನೇ ವರ್ಷಚಾರಣೆ ಮಾಡೋಣ ಎಂದು ತೀರ್ಮಾನ ಮಾಡಿದೆವು. ಸ್ವಾಗತ ಸಮಿತಿ ರಚಿಸಿ ಬಳಿಕ ಸಿದ್ದರಾಮಯ್ಯ ಅವರನ್ನ ಒಪ್ಪಿಸಿದೆವು.

ಪಕ್ಷಕ್ಕೆ ಮುಜುಗರ ಆಗದಂತೆ  ಪಕ್ಷದ ಗಮನಕ್ಕೆ ತಂದು ಆಚರಣೆ  ಮಾಡುತ್ತಿದ್ದೇವೆ. ರಾಹುಲ್ ಗಾಂಧಿ ಜೊತೆ ಚರ್ಚೆ ಮಾಡಿ ಆಚರಣೆ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ. ಎಲ್ಲರು ಒಗ್ಗಟ್ಟಾಗಿ ಕಾರ್ಯಕ್ರಮ ಯಶಸ್ವಿಗೊಳಿಸೋಣ.ಇದು ಕಾಂಗ್ರೆಸ್ ನಾಯಕರು ಸೇರಿ ಮಾಡುತ್ತಿರುವ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ  ಆಸಕ್ತಿ ಇರುವವರು ಭಾಗಿಯಾಗಬಹುದು ಎಂದು ಡಾ. ಹೆಚ್ ಸಿ ಮಹದೇವಪ್ಪ ಹೇಳಿದರು.

Key words: Siddaramotsava-celebrate-Former minister -HC Mahadevappa.