ದೇಶ ಪ್ರಬಲವಾಗಬೇಕಾದರೆ ಸಿದ್ದರಾಮಯ್ಯನವರ ನಾಯಕತ್ವದ ಅಗತ್ಯವಿದೆ- ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ.

ಮೈಸೂರು,ಜುಲೈ,23,2022(www.justkannada.in): ದೇಶ ದುರ್ಬಲವಾಗುತ್ತಿದ್ದು, ಪ್ರಜಾಪ್ರಭುತ್ವ ಆಪಾಯದಲ್ಲಿದೆ.ದೇಶ ಪ್ರಬಲವಾಗಬೇಕಾದರೆ ಮಾಜಿ ಸಿಎಂ  ಸಿದ್ದರಾಮಯ್ಯನವರ ನಾಯಕತ್ವದ ಅಗತ್ಯವಿದೆ ಎಂದು ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ನುಡಿದರು.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಸಿದ್ದರಾಮಯ್ಯರನ್ನು ಮುಂಗೋಪಿ ಎನ್ನುತ್ತಾರೆ. ಜನವಿರೋಧಿಗಳ ಧ್ವನಿ ಅಡಗಿಸಲು ಸಿದ್ದರಾಮಯ್ಯ ಮುಂದಾಗುವುದರಿಂದ ಮುಂಗೋಪಿ ಎನಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಎಂದೂ ಜಾತಿಯ ಹಂಗಿನಲ್ಲಿ ಕೆಲಸ ಮಾಡಲಿಲ್ಲ. ಅವರನ್ನು ಕೆಲವರಷ್ಟೇ ವಿರೋಧಿಸುತ್ತಾರೆ. ಆದರೆ ಕೋಟ್ಯಾಂತರ ಜನ ಪ್ರೀತಿಸುತ್ತಾರೆ. ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಸ್ಥಾನಗಳು ಸಂವಿಧಾನಿಕ ಹುದ್ದೆಗಳೇ ಹೊರತು, ಜಾತಿ ಆಧಾರಿತ ಹುದ್ದೆಗಳಲ್ಲ. ಈ ಎಲ್ಲಾ ವಿಚಾರಗಳು ಗ್ರಂಥದಲ್ಲಿ ಉಲ್ಲೇಖವಾಗಿವೆ. ನಾಡಿನ ಜನತೆಗೆ ಈ ಗ್ರಂಥ ಅಮೂಲ್ಯವಾದ ಕೊಡುಗೆ. ಗ್ರಂಥಕ್ಕೆ 27 ಮಹನೀಯರು ಅವರ ರಚನೆಯನ್ನು ಕೊಟ್ಟಿದ್ದಾರೆ. ಇದರ ಒಟ್ಟಾರೆ ತಾತ್ಪರ್ಯ ಪ್ರಜಾಪ್ರಭುತ್ವ, ಸಂವಿಧಾನ ಜಾರಿಯಾಗಲು ಬೇಕಾದ ಅಂಶಗಳನ್ನು ಒಳಗೊಂಡಂತೆ ಹಲವು ಮಹತ್ವದ ವಿಚಾರಗಳನ್ನು ಒಳಗೊಂಡಿದೆ. ಗ್ರಂಥದಲ್ಲಿ ಸಿದ್ದರಾಮಯ್ಯನವರ ಅವಧಿಯ ಆಡಳಿತ ನಿರ್ವಹಣೆಯನ್ನು ವಿಶ್ಲೇಷಣೆ ಮಾಡಲಾಗಿದೆ ಎಂದರು.

ಪ್ರಜಾಪ್ರಭುತ್ವ ಆಪಾಯದಲ್ಲಿದೆ. ದೇಶ ದುರ್ಬಲವಾಗುತ್ತಿದೆ‌. ದೇಶ ಪ್ರಬಲವಾಗಬೇಕಾದರೆ ಸಿದ್ದರಾಮಯ್ಯನವರ ನಾಯಕತ್ವದ ಅಗತ್ಯವಿದೆ. ಈ ಬಗ್ಗೆ ವೇದಿಕೆಯಲ್ಲಿರುವ ಮತ್ತೊಬ್ಬ ಹಿರಿಯ ನಾಯಕರು ಅನ್ಯತಾ ಭಾವಿಸಬಾರದು. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಆಡಳಿತ ವ್ಯವಸ್ಥೆಯನ್ನು ಹದ್ಧುಬಸ್ತಿನಲ್ಲಿಟ್ಟಿದ್ದರು. ಚರಿತ್ರೆ ಹೋರಾಟದ ಹಿನ್ನೆಲೆ ಈ ರೀತಿಯ ಯೋಗ್ಯತೆ ಇರುವವರು ಅಂತಹ ಸ್ಥಾನಕ್ಕೆ ಅರ್ಹರು. ಯೋಗ್ಯರಿಗೆ ಸಿಎಂ ಸ್ಥಾನ. ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಕೊಟ್ಟ ಅನ್ನ ಭಾಗ್ಯದ ಮಹತ್ವ ಕೋವಿಡ್ ಸಂದರ್ಭದಲ್ಲಿ ಜನರಿಗೆ ಗೊತ್ತಾಯಿತು ಎಂದು ಮಾಜಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಹೇಳಿದರು.

Key words: Siddaramaiah- leadership – needed – country-Former minister -HC Mahadevappa