ಶಾಸಕ ರೋಷನ್ ಬೇಗ್ ಸಸ್ಪೆಂಡ್ ಗೆ ಕಾರಣ ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ…

ನವದೆಹಲಿ,ಜೂ,19,2019(www.justkannada.in):  ಕಾಂಗ್ರೆಸ್ ಪಕ್ಷದಿಂದ ಶಾಸಕ ರೋಷನ್ ಬೇಗ್ ಅವರನ್ನ ಅಮಾನತು ಮಾಡಲಾಗಿದ್ದು,  ರೋಷನ್ ಬೇಗ್ ಅವರನ್ನ ಅಮಾನತು ಮಾಡಲು ಕಾರಣದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿಯಲ್ಲಿ ಇಂದು ಮಾತನಾಡಿರುವ ಸಿದ್ದರಾಮಯ್ಯ,  ರೋಷನ್ ಬೇಗ್ ಅವರಿಗೆ ಪಕ್ಷದಿಂದ ನೋಟೀಸ್ ನೀಡಲಾಗಿತ್ತು. ಆದರೆ ನೋಟೀಸ್ ಗೆ ಅವರು ಉತ್ತರಿಸಿರಲಿಲ್ಲ. ಅದ್ದರಿಂದ ಅವರನ್ನ ಅಮಾನತು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಪಕ್ಷದಲ್ಲಿ ಅಶಿಸ್ತನ್ನ ಸಹಿಸಲು ಆಗುವುದಿಲ್ಲ. ಹೀಗಾಗಿ ಅವರಿಗೆ ನೀಡಿದ್ದ ನೋಟೀಸ್  ಗೆ ಅವರು ಉತ್ತರ ನೀಡಿರಲಿಲ್ಲ. ಹೀಗಾಗಿ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಹೈಕಮಾಂಡ್ ಗೆ ಶಿಫಾರಸ್ಸು ಮಾಡಿತ್ತು. ಅದ್ದರಿಂದ ಅವರನ್ನ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದರು.

Key words: Siddaramaiah – gave-reason- Roshan Baig- suspension.