ಸಿದ್ಧರಾಮಯ್ಯ ಆನೆ ಇದ್ಧಂತೆ, ಆನೆ ಹೋಗ್ತಿದ್ರೆ ನಾಯಿ ಬೊಗಳುತ್ತವೆ- ವಿರೋಧಿಗಳಿಗೆ ಈ ರೀತಿ ಟಾಂಗ್ ನೀಡಿದ್ದು ಯಾರು ಗೊತ್ತೆ..?

ಮೈಸೂರು,ಜೂನ್,28,2021(www.justkannada.in): ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರಿ ಫೈಟ್ ನಡೆಯುತ್ತಿದ್ದು ಈ ಮಧ್ಯೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರೋಧಿಗಳಿಗೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ  ಟಾಂಗ್ ನೀಡಿದ್ದಾರೆ.former minister-HC Mahadevappa -batting –former CM- Siddaramaiah- Proclamation of defiance

ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ, ಸಿದ್ಧರಾಮಯ್ಯ ಆನೆ ಇದ್ದಂತೆ. ಆನೆ  ಹೋಗ್ತಿದ್ರೆ ನಾಯಿ ಬೊಗಳುತ್ತವೆ. ಸಿದ್ಧರಾಮಯ್ಯ ಆಲದ ಮರ ಇದ್ದಂತೆ ಎಂದು ಸಿದ್ಧರಾಮಯ್ಯರನ್ನ  ಹೊಗಳಿ ವಿರೋಧಿಗಳಿಗೆ ತಿರುಗೇಟು ನೀಡಿದರು.

lockdown-government –responsibility- Opposition leader -Siddaramaiah
siddaramaih#profile..

ನಿನ್ನೆ ಸಿದ್ಧರಾಮಯ್ಯ ನಮ್ಮ ಮನೆಗೆ ಊಟಕ್ಕೆ ಬಂದಿದ್ದು ನಿಜ.  ಆದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ.  ಸಿದ್ದು ಆಲದ ಮರವಿದ್ದಂತೆ. ಆನೆ ಇದ್ದಂತೆ.  ಸಿದ್ಧರಾಮಯ್ಯ ಯಾರನ್ನೂ ಹೇಳಿ ಕೇಳಿ ಸಿಎಂ ಆಗಬೇಕಿಲ್ಲ ಎಂದು ಹೆಚ್.ಸಿ ಮಹದೇವಪ್ಪ ಹೇಳಿದರು.

Key words: Siddaramaiah -elephant –stands-dog-former minister-HC Mahadevappa