ಶಬರಿಮಲೆಯಲ್ಲೂ ‘ಸಿದ್ದರಾಮಯ್ಯ ಸಿಎಂ’ ಕೂಗು : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಬೆಂಗಳೂರು,ಜನವರಿ,15,2022(www.justkannada.in): “ಅಯ್ಯಪ್ಪೋ, ಅಯ್ಯಪ್ಪೋ ಸಿದ್ದರಾಮಯ್ಯ ಸಿಎಂ ಆಗಲಪ್ಪೋ ಎಂದು ಸ್ಮರಿಸುತ್ತಾ ಶಬರಿ ಮಲೆಯಲ್ಲಿ ಮೆಟ್ಟಿಲು ಹತ್ತುತ್ತ ಮುಂದಿನ ಸಿಎಂ ಸಿದ್ದರಾಮಯ್ಯ ಆಗಲಿ ಎಂದು ದೇವರಲ್ಲಿ ಮೊರೆ ಹೋದ ಸಿದ್ಧರಾಮಯ್ಯ ಅವರ ಅಭಿಮಾನಿಗಳು.

ಹೌದು, ಸಿದ್ದರಾಮಯ್ಯ ಸಿಎಂ ಆಗಲೆಂದು ಅಭಿಮಾನಿಗಳು ಶಬರಿಮಲೆ ಯಾತ್ರೆ ಕೈಗೊಂಡಿದ್ದು ಇರುಮುಡಿ ಹೊತ್ತು ಅಯ್ಯಪ್ಪನ ಬಳಿ ಸಂಕಲ್ಪ ಮಾಡಿದ್ದಾರೆ. ಈ ಮೂಲಕ ಶಬರಿಮಲೆಯಲ್ಲೂ ಸಿದ್ದರಾಮಯ್ಯ ಸಿಎಂ ಕೂಗು ಕೇಳಿ ಬಂದಿದ್ದು, ಮಾಲಾಧಾರಿ ಅಯ್ಯಪ್ಪ ಭಕ್ತರು ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಸ್ಮರಿಸಿದ್ದಾರೆ.

“ಅಯ್ಯಪ್ಪೋ ಅಯ್ಯಪ್ಪೋ ಸಿದ್ದರಾಮಯ್ಯ ಸಿಎಂ ಆಗಲಪ್ಪೋ”ಎಂದು ಸ್ಮರಣೆ ಮಾಡುತ್ತ ಸಿದ್ಧರಾಮಯ್ಯ ಅವರ ಮೂವರು ಅಭಿಮಾನಿಗಳು ಶಬರಿಗಿರಿ ಏರಿ ಮುಂದಿನ ಸಿಎಂ ಸಿದ್ದರಾಮಯ್ಯ ಆಗಲಿ ಎಂದು  ದೇವರಲ್ಲಿ ಪ್ರಾರ್ಥಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದೆ.

Key words: Siddaramaiah –CM- shout- Sabarimala