ನಿರ್ಮಲಾನಂದನಾಥ ಶ್ರೀಗಳ ಭೇಟಿ ಬಳಿಕ ಯುಟರ್ನ್: ಉರಿಗೌಡ ನಂಜೇಗೌಡ ಕುರಿತು ಸಿನಿಮಾ ಮಾಡಲ್ಲ ಎಂದ ಸಚಿವ ಮುನಿರತ್ನ.

ಮಂಡ್ಯ,ಮಾರ್ಚ್,20,2023(www.justkannada.in):  ನಿರ್ಮಲಾನಂದನಾಥ ಶ್ರೀಗಳನ್ನ ಭೇಟಿಯಾಗಿ ಚರ್ಚಿಸಿದ ಬಳಿಕ ಉರಿಗೌಡ ನಂಜೇಗೌಡ ಕುರಿತು ಸಿನಿಮಾ ನಿರ್ಮಾಣ ಮಾಡುವ ಕುರಿತು ತೋಟಗಾರಿಕೆ ಸಚಿವ ಮುನಿರತ್ನ ಯುಟರ್ನ್ ಹೊಡೆದಿದ್ದಾರೆ.

ಹೌದು, ಉರಿಗೌಡ ನಂಜೇಗೌಡ ಕುರಿತು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದ ಸಚಿವ ಮುನಿರತ್ನ ಇದೀಗ ಸಿನಿಮಾ  ಮಾಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಮುನಿರತ್ನ, ಉರಿಗೌಡ ನಂಜೇಗೌಡ ಕುರಿತು ಸಿನಿಮಾ ನಿರ್ಮಾಣ ಮಾಡಲ್ಲ. ಮೇ 14ಕ್ಕೆ ಸಿನಿಮಾ ನಿರ್ಮಿಸಬೇಕೆಂದುಕೊಂಡಿದ್ದೆ. ಉರಿಗೌಡ ದೊಡ್ಡ ನಂಜೇಗೌಡ ಬಗ್ಗೆ ಕೆಲ ದಾಖಲೆಗಳಿವೆ. ಉರಿಗೌಡ ಬಗ್ಗೆ ಒಂದಷ್ಟು ದಾಖಲೆಗಳಿಲ್ಲ ಎಂದರು.

ನಿರ್ಮಲಾನಂದನಾಥ ಶ್ರೀಗಳ ಜೊತೆ ಮಾತನಾಡಿದ್ದೇನೆ. ಯಾರ ಮನಸ್ಸು ನೋಯಿಸಿ ಸಿನಿಮಾ ಮಾಡಬಾರದು.  ಸಿನಿಮ ಮಾಡಲು ಕಥೆಗಳು ತುಂಬಾ ಸಿಗುತ್ತವೆ. ಕಥೆಯ ಬಗ್ಗೆ ನಿರ್ಮಲಾನಂದನಾಥ ಶ್ರೀಗಳಿಗೆ ಹೇಳಿದ್ದೇನೆ. ಯಾರಿಗೂ ನೋಯಿಸುವ ಉದ್ಧೇಶವಿಲ್ಲ ಎಂದು ಸಚಿವ ಮುನಿರತ್ನ ತಿಳಿಸಿದರು.

Key words:  Shri Nirmalanandanath swamiji- Minister -Muniratna – not – film – Urigowda -Nanjegowda