ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಸಿಎಂ ಸಿದ್ಧರಾಮಯ್ಯ ಆರೋಗ್ಯ ವಿಚಾರಿಸಿದ ‘ಎಸ್ ಬಿಎಂ ಟೀಮ್’…

ಬೆಂಗಳೂರು, ಡಿ, 14,2019(www.justkannada.in):  ಅನಾರೋಗ್ಯ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು  ಹಲವು ನಾಯಕರು ಪಕ್ಷಾತೀತವಾಗಿ ಭೇಟಿಯಾಗಿ ಬೇಗ ಗುಣಮುಖಲಾಗಲೆಂದು ಹಾರೈಸಿದ್ದಾರೆ.

ಈ ನಡುವೆ ಎಸ್ ಬಿಎಂ ಟೀಮ್ ಸಿದ್ಧರಾಮಯ್ಯ ಅವರನ್ನ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಹೌದು ಎಸ್ ಬಿ ಎಂ ಶಾಸಕರು ಎಂದು ಹೆಸರಾಗಿರುವ  ಎಸ್.ಟಿ ಸೋಮಶೇಖರ್ , ಭೈರತಿ ಬಸವರಾಜು ಮತ್ತು ಮುನಿರತ್ನ ಇಂದು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ನೆಚ್ಚಿನ ನಾಯಕನಿಗೆ ನೀವು ಬೇಗ ಚೇತರಿಸಿಕೊಳ್ಳಿ ಎಂದು ಶುಭ ಹಾರೈಸಿದರು.

ಈ ವೇಳೆ, ಸಿದ್ದರಾಮಯ್ಯ, ‘ಏನ್ರಯ್ಯ ಎಸ್ ಬಿಎಂ ಟೀಮ್ ಮೂವರು ಒಟ್ಟಿಗೆ ಬಂದಿದ್ದಿರಿ, ಬಿಜೆಪಿಯವರು ನಿಮ್ಮನ್ನು ಮಂತ್ರಿ ಮಾಡಿದ್ರಾ.  ಬಿಎಸ್ ವೈ ಮಾಡ್ತಾರೆ ಬಿಡಿ ಎಂದು ಕಿಚಾಯಿಸಿದರು. ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ ಹಾಗೂ ಮುನಿರತ್ನ ಆಪ್ತ ಸ್ನೇಹಿತರಾಗಿದ್ದು, ಸಿದ್ದರಾಮಯ್ಯ ಶಿಷ್ಯರು ಎಂದು ಗುರತಿಸಿಕೊಂಡಿದ್ದರು.

ಭೇಟಿ ಬಳಿಕ ಮಾತನಾಡಿದ ಶಾಸಕ ಎಸ್.ಟಿ ಸೋಮಶೇಖರ್, ನಮ್ಮ ನಾಯಕನಿಗೆ ಆ ಭಗವಂತ ಆಯುಸ್ಸು ಆರೋಗ್ಯ ನೀಡಲಿ.  ದೇವರು ಸಿದ್ದರಾಮಯ್ಯಗೆ ಮೊದಲಿನಂತೆ ಆರೋಗ್ಯ ನೀಡಲಿ. ಪಕ್ಷ ಬಿಟ್ಟ ನಂತರ ಮೊದಲ ಬಾರಿಗೆ ಸಿದ್ಧರಾಮಯ್ಯ ಅವರನ್ನ ಭೇಟಿಯಾಗಿದ್ದೇವೆ.  ಮಾನವೀಯತೆ ದೃಷ್ಠಿಯಿಂದ ಬಂದು ಆರೋಗ್ಯ ವಿಚಾರಿಸಿದ್ದೇವೆ ಎಂದರು.

Key words: SBM –Team-visit -hospital -Former CM -Siddaramaiah- health