ವಾಟಾಳು ಮಠಕ್ಕೆ ಆರ್ ಎಸ್ ಎಸ್ ಮತ್ತು ಬಿಜೆಪಿ ಮುಖಂಡ ತುಕಾರಾಂ ಕುಲಕರ್ಣಿ ಭೇಟಿ…

kannada t-shirts

ಮೈಸೂರು,ಜನವರಿ,15,2021(www.justkannada.in):  ಮೈಸೂರು ಜಿಲ್ಲೆ ನರಸೀಪುರದ ವಾಟಾಳು ಮಠಕ್ಕೆ RSS ಮತ್ತು ಬಿಜೆಪಿ ಮುಖಂಡ ತುಕಾರಾಂ ಕುಲಕರ್ಣಿ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ತುಕಾರಾಂ ಕುಲಕರ್ಣಿ ಇಂದು ವಾಟಾಳು ಮಠಕ್ಕೆ ಭೇಟಿ ನೀಡಿ ಡಾ ಸಿದ್ಧಲಿಂಗಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದ ಪಡೆದು ಶ್ರೀಗಳ ಕುಶಲೋಪರಿ ವಿಚಾರಿಸಿದರು.rss-bjp-leader-tukaram-kulkarni-visit-vattal-math-mysore

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು. ವಾಟಾಳು ಮಠ ಜಾತಿ ಧರ್ಮವನ್ನ ಮೀರಿದ ಮಠವಾಗಿದೆ. ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಆಗಮಿಸಿದ್ದೇನೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದ ಅಭ್ಯರ್ಥಿ ಆಕಾಂಕ್ಷೆಯಾಗಿದ್ದೇನೆ. ಮೂಲತಃ ನಾನು RSS ಮತ್ತು ಬಿಜೆಪಿಯಲ್ಲಿ ಶಿಸ್ತಿನ ಸಿಪಾಯಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಪಕ್ಷ ನನಗೆ ಟಿಕೆಟ್ ನೀಡುವ ಭರವಸೆ ಹೊಂದಿದ್ದೇನೆ. ಪಕ್ಷದ ತೀರ್ಮಾನಕ್ಕೆ ಬದ್ದನಾಗಿರುತ್ತೇನೆ ಎಂದು ತುಕಾರಾಂ ಕುಲಕರ್ಣಿ ಹೇಳಿದರು.

Key words: RSS – BJP leader- Tukaram Kulkarni -visit -Vattal Math.-mysore

website developers in mysore