ಬೀಗ ಒಡೆದು ಎರಡು ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ: ನಗದು, ಚಿನ್ನಾಭರಣ ದೋಚಿದ ಖದೀಮರು…

ಮೈಸೂರು,ಜನವರಿ,6,2021(www.justkannada.in): ಖದೀಮರು ಎರಡು ದೇವಸ್ಥಾನಗಳ ಬೀಗ ಒಡೆದು  ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.Robbery - two -temple –mysore-kr nagar

ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಆದಿಶಕ್ತಿ ಮುತ್ತುತಾಳಮ್ಮ ಮತ್ತು ವೀರಭದ್ರೇಶ್ವರ ದೇವಸ್ಥಾನದಲ್ಲಿ  ಕಳ್ಳರು ಕೈಚಳಕ ತೋರಿದ್ದಾರೆ.  ಮುತ್ತುತಾಳಮ್ಮ ದೇವಾಲಯದಲ್ಲಿ15  ಗ್ರಾಂ ಚಿನ್ನದ ತಾಳಿ ಮತ್ತು ಗುಂಡು, 250 ಗ್ರಾಂ ಬೆಳ್ಳಿ ಹಾಗೂ ಗೊಲುಕದಲ್ಲಿದ್ದ ಅಂದಾಜು 10 ಸಾವಿರ ನಗದನ್ನ  ದೋಚಿದ್ದಾರೆ.Robbery - two -temple –mysore-kr nagar

ಹಾಗೆಯೇ  ವೀರಭದ್ರೇಶ್ವರ ದೇವಾಲಯದಲ್ಲಿ 1500 ಗ್ರಾಂ ಬೆಳ್ಳಿಯ 2 ಬಸವ 1 ಕುದುರೆ 3 ಲಿಂಗದ ಕಾಯಿ ಮತ್ತು ಗೊಲುಕದಲ್ಲಿದ್ದ  ಅಂದಾಜು 12 ಸಾವಿರ ರೂಪಾಯಿ ಹಣವನ್ನ  ಕಳವು ಮಾಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಕೆ.ಆರ್.ನಗರ ಠಾಣೆಯ ಪೊಲೀಸರು ಭೇಟಿ  ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

Key words: Robbery – two -temple –mysore-kr nagar