ಮತ್ತೆ ಒಂದಾದ ‘ಸ್ಪೆಷಲ್’ ಗುರು-ಶಿಷ್ಯರು !

ಬೆಂಗಳೂರು, ಅಕ್ಟೋಬರ್ 15, 2020 (www.justkannada.in): ಮತ್ತೆ ಡಾಲಿ ಧನಂಜಯ್ ಹಾಗೂ ಮಠ ಗುರುಪ್ರಸಾದ್ ಒಂದಾಗುತ್ತಿದ್ದಾರೆ.

ಧನಂಜಯ್ ನಿರ್ಮಾಣದ ಮೊದಲ ಚಿತ್ರ ‘ ಬಡವ ರಾಸ್ಕಲ್ ‘ ಸಿನಿಮಾದಲ್ಲಿ ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಕಾಣಿಸಿಕೊಂಡಿದ್ದಾರೆ .

ಧನಂಜಯ್ – ಗುರುಪ್ರಸಾದ್ ಕಾಂಬಿನೇಷನ್ ನ ಎರಡನೇ ಚಿತ್ರ ಇದಾಗಿದ್ದು , ಈ ಹಿಂದೆ ‘ ಡೈರೆಕ್ಟರ್ ಸ್ಪೆಷಲ್ ‘ ಚಿತ್ರದಲ್ಲಿ ಇಬ್ಬರು ನಟಿಸಿದ್ದರು.

ಬಡವ ರಾಸ್ಕಲ್ ‘ ಚಿತ್ರಕ್ಕೆ ಶಂಕರ್ ಗುರು ಆ್ಯಕ್ಷನ್ ಕಟ್ ಹೇಳಿದ್ದು , ಧನಂಜಯ್ ಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.