ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಪ್ರವಾಸಿಗರ ಹಣ , ಚಿನ್ನ ಲ್ಯಾಪ್ ಟಾಪ್ ಕಳವು…

kannada t-shirts

ಮೈಸೂರು, ನವೆಂಬರ್, 23,2020(www.justkannda.in) ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಪ್ರವಾಸಿಗರೊಬ್ಬರ ಚಿನ್ನಾಭರಣ, ಹಣ, ಲ್ಯಾಪ್ ಟಾಪ್ ಅನ್ನ ಕಳುವು ಮಾಡಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.kannada-journalist-media-fourth-estate-under-loss

ಮೈಸೂರಿನ ಎಚ್.ಡಿ.ಕೋಟೆಯಬದನಗುಪ್ಪೆ ಗ್ರಾಮದಲ್ಲಿರುವ ರೆಡ್ ಎರ್ಥ್ ರೆಸಾರ್ಟ್‌ನಲ್ಲಿ ಘಟನೆ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ಸುದೀರ್ ಯಜವತ್ ಹಣ, ಚಿನ್ನ ಕಳೆದುಕೊಂಡವರು. 60ಸಾವಿರ ನಗದು, ಚಿನ್ನದ ಕೈ ಚೈನ್ ಲ್ಯಾಪ್ ಟಾಪ್  ಅನ್ನ ಕಳುವು ಮಾಡಲಾಗಿದೆ. ಸುದೀರ್ ಬೆಂಗಳೂರಿನಿಂದ ಬಂದು ರೆಡ್ ಹಾರ್ಥ್ ರೆಸಾರ್ಟ್‌ನಲ್ಲಿ ತಂಗಿದ್ದರು.

ಸುಧೀರ್ ಶನಿವಾರ ರಾತ್ರಿ ಊಟಕ್ಕೆ ತೆರಳಿದ್ದು ಈ ವೇಳೆ ಚಿನ್ನ ಹಣ ಕಳ್ಳತನವಾಗಿದೆ. ಘಟನಾ ಸ್ಥಳಕ್ಕೆ ಶ್ವಾನದಳ ಬೆರಳಚ್ವು ತಜ್ಣರ ಭೇಟಿ ನೀಡಿ ಪರಿಸೀಲನೆ ನಡೆಸಿದ್ದು, ರೆಸಾರ್ಟ್‌ನಲ್ಲಿದವರನ್ನ ಠಾಣೆಗೆ ಕರೆಸಿ ಪಿಎಸ್ ಐ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಈ ಕುರಿತು ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words –resort- Travelers- money- gold – lap top –stolen-mysore

website developers in mysore