“ಮೀಸಲು ಸೌಲಭ್ಯಕ್ಕೆ ಹೋರಾಟ ನಡೆಸಿದ್ದು ತಪ್ಪೇನಲ್ಲ” : ಡಿಸಿಎಂ ಗೋವಿಂದ ಕಾರಜೋಳ

ಬೆಂಗಳೂರು,ಫೆಬ್ರವರಿ,14,2021(www.justkannada.in) : ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲು ಸೌಲಭ್ಯಕ್ಕೆ ಹೋರಾಟ ನಡೆಸಿದ್ದು ತಪ್ಪೇನಲ್ಲ. ಸಾಂವಿಧಾನದ ಆಶಯದಂತೆ ಶೋಷಿತ ಎಲ್ಲ ಸಮುದಾಯಗಳಿಗೂ ಮುಖ್ಯವಾಹಿನಿಗೆ ಬರಲು ಮೀಸಲಾತಿ ಸಿಗಲಿ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. Reserve,facility,Fight,Powered,Blogger,Nothing,wrong,DCM,Govinda Karajola

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಶೋಷಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದೇ ಸಂವಿಧಾನದ ಆಶಯ. ಈ ಆಶಯದ ವ್ಯಾಪ್ತಿಗೆ ಬರುವ ಎಲ್ಲ ಸಮುದಾಯಗಳೂ ಮೀಸಲು ಸೌಲಭ್ಯ ಪಡೆಯಲಿ ಎಂದರು.

key words : Reserve-facility-Fight-Powered-Blogger-Nothing- wrong-DCM-Govinda Karajola