ಗಣರಾಜ್ಯೋತ್ಸವದಂದು ವಿಧ್ವಂಸಕ ಕೃತ್ಯಕ್ಕೆ ಸಂಚು ಆರೋಪ: ಐವರು ಉಗ್ರರ ಬಂಧನ…

ಜಮ್ಮು ಕಾಶ್ಮೀರ,ಜ,16,2020(www.justkannada.in): ಗಣರಾಜ್ಯೋತ್ಸವ  ದಿನದಂದು ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವ ಆರೋಪದ ಮೇಲೆ ಜಮ್ಮು ಕಾಶ್ಮೀರದಲ್ಲಿ ಐವರು ಉಗ್ರರನ್ನ ಪೊಲೀಸರು ಬಂಧಿಸಿದ್ದಾರೆ.

ಈ ಮೂಲಕ ಗಣರಾಜ್ಯೋತ್ಸವ  ದಿನದಂದು ವಿಧ್ವಂಸಕ ಕೃತ್ಯ  ನಡೆಸಿದ್ದ ಸಂಚು ಅನ್ನ ಜಮ್ಮುಕಾಶ್ಮೀರ ಪೊಲೀಸರು ವಿಫಲಗೊಳಿಸಿದ್ದಾರೆ. ಶ್ರೀನಗರದಲ್ಲಿ ಜೈಶ್-ಎ-ಮೊಹಮದ್ ಸಂಘಟನೆಗೆ ಸೇರಿದ ಐವರು ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.

ಗಣರಾಜ್ಯೋತ್ಸವದ ವೇಳೆ ದುಷ್ಕೃತ್ಯ ನಡೆಸಲು ಉಗ್ರರು ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕಾಶ್ಮೀರ ಪೊಲೀಸರು ತೀವ್ರ ನಿಗಾ ವಹಿಸಿದ್ದರು. ಈ ನಡುವೆ ಕಳೆದ ಎರಡು ದಿನಗಳ ಹಿಂದೆ ಈ ಭಯೋತ್ಪಾದಕರ ತಂಡ ಗ್ರೇನೇಡ್ ಸ್ಪೋಟಿಸಿ ದುಷ್ಕೃತ್ಯ ನಡೆಸಲು ತಾಲೀಮು ನಡೆಸಿತ್ತು.  ಈ ಆಧಾರದ ಮೇಲೆ ಇಂದು ಜಮ್ಮು ಕಾಶ್ಮೀರ ಪೊಲೀಶರು ಐವರು ಉಗ್ರರನ್ನು ಹೆಡೆಮುರಿಕಟ್ಟಿದ್ದಾರೆ.

Key words: Republic Day-arrest – five –terrorist-jammu kashmir