“ರಿಲಯನ್ಸ್ ಕಂಪನಿ ಬಾಯ್ಕಾಟ್, ಜಿಯೋ ಸಿಮ್ ವಾಪಸ್ “: ರೈತರಿಂದ ವಿನೂತನ ಪ್ರತಿಭಟನೆ

ಮೈಸೂರು,ಜನವರಿ,09,2021(www.justkannada.in) :  ದೆಹಲಿಯ ರೈತ ಪ್ರತಿಭಟನೆ ಹಿನ್ನಲೆ ಜಿಯೋ ಸಿಮ್ ವಾಪಸ್ ಘೋಷಣೆಗಳೊಂದಿಗೆ ಜಿಯೋ ಸಿಮ್ಗೆ ಉಗಿದು ರಿಲಯನ್ಸ್ ಕಂಪನಿಗೆ ಛೀಮಾರಿ ಹಾಕಿ ರೈತರಿಂದ ಪ್ರತಿಭಟನೆ ನಡೆಸಲಾಯಿತು.jk-logo-justkannada-mysoreನಗರದ ಆರು ರಸ್ತೆಯಲ್ಲಿರುವ ಜಿಯೋ ಔಟ್ ಲೆಟ್ ಮುಂದೆ ಅಂಬಾನಿ, ಅದಾನಿ ವಿರುದ್ಧ ರೈತರ ಆಕ್ರೋಶಪಡಿಸಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಅವೈಜ್ಞಾನಿಕ ಕೃಷಿ ಕಾಯ್ದೆ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ. ರಿಲಯನ್ಸ್ ಕಂಪೆನಿಗೆ ಲಾಭ ಮಾಡಿಕೊಡಲು ಕೇಂದ್ರ ಮುಂದಾಗಿದೆ ಎಂದು ಕಿಡಿಕಾರಿದರು.

Farmer Rajyotsava -celebration – republic day- 26th January – mysore-Kurubur Shantakumar

ರಿಲಯನ್ಸ್ ಕಂಪನಿಯನ್ನು ಬಾಯ್ಕಾಟ್ ಮಾಡುತ್ತಿದ್ದೇವೆ. ಜಿಯೋ ಸಿಮ್ ವಾಪಸ್ ಮಾಡಿ ಬೇರೆ ಕಂಪನಿಯ ಸಿಮ್ ಉಪಯೋಗಿಸಲು ಮುಂದಾಗುತ್ತಿದ್ದೇವೆ ಎಂದು ತಿಳಿಸಿದರು.

key words : Reliance-Company-Boycott-Geo-Sim-Returns-farmers-Exclusive-Protest