ತಮ್ಮ ವಿರುದ್ದ ಅಶ್ಲೀಲ ಆಡಿಯೋ ಬಿಡುಗಡೆ ವಿಚಾರ: ಇದು ಎದುರಾಳಿಗಳ ಷಡ್ಯಂತ್ರ- ಸ್ಪಷ್ಟನೆ ನೀಡಿದ ಹೆಚ್.ವಿಶ್ವನಾಥ್…

ಬೆಂಗಳೂರು,ಜು,9,2019(www.justkannada.in):  ತಮ್ಮ ವಿರುದ್ದ ಅಶ್ಲೀಲ ಆಡಿಯೋ ಬಿಡುಗಡೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ  ಸ್ಪಷ್ಟನೆ ನೀಡಿರುವ ಶಾಸಕ ಹೆಚ್.ವಿಶ್ವನಾಥ್, ಇಂತಹ ಸಂದರ್ಭದಲ್ಲಿ ಎಲ್ಲವನ್ನೂ ಹುಟ್ಟು ಹಾಕುತ್ತಾರೆ. ಇದು ನನ್ನ ಎದುರಾಳಿಗಳ ಷಡ್ಯಂತ್ರ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಶಾಸಕ ಹೆಚ್.ವಿಶ್ವನಾಥ್,  ನನ್ನ ವೈಯಕ್ತಿಕ ಜೀವನ,‌ ನನ್ನ ಆರ್ಥಿಕ ಪರಿಸ್ಥಿತಿ ಎಲ್ಲ ವಿಚಾರಗಳನ್ನು ಹಳ್ಳಿ ಹಕ್ಕಿಯಲ್ಲಿ ಬರೆದಿದ್ದೇನೆ. ನನ್ನ ಚಾರಿತ್ರ್ಯ ಹರಣ ಮಾಡುವ‌ ಪ್ರಯತ್ನ ಮಾಡಲಾಗಿದೆ. ಇಂತಹದನ್ನು‌ ಬೇಕಾದ ಷ್ಟು ನೋಡಿದ್ದೇವೆ. ಇದಕ್ಕೆಲ್ಲ ಬೆದರುವುದಿಲ್ಲ. ಸಚಿವ  ಸ್ಥಾನ ಸೇರಿದಂತೆ ಯಾವುದೇ ಆಮಿಷಕ್ಕೆ ನಾನು ಒಪ್ಪದ‌ ಕಾರಣ ಈ ಹೊಸ ಪ್ರಯೋಗವನ್ನು ಮಾಡಲಾಗಿದೆ. ಇಂತಹ ಕುತಂತ್ರಗಳು ಫಲ ನೀಡುವುದಿಲ್ಲ ಎಂದು ತಿಳಿಸಿದರು.

ನನ್ನ ಜೀವನ ಏನು ಎಂಬುದು ನನ್ನ ಕ್ಷೇತ್ರದ ಜನರಿಗೆ ತಿಳಿದಿದೆ‌. ಇದಕ್ಕೆಲ್ಲ ತಲೆಕೆಡಸಿಕೊಳ್ಳುವ ಅಗತ್ಯವಿಲ್ಲ. ನನ್ನ ಬ್ಲಾಕ್ ಮೇಲ್ ಮಾಡುವ ಉದ್ದೇಶ ದಿಂದ ಈ ರೀತಿಯ ಕೀಳು ರಾಜಕೀಯ ‌ಮಾಡಲಾಗಿದೆ. ಹುಣಸೂರು ಕ್ಷೇತ್ರದಲ್ಲಿ ನನ್ನ ಎದುರಾಳಿಗಳು ನನ್ನ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಇಂತಹ ಬೆದರಿಕೆ ಗೆ ಬಗ್ಗುವ ಜಾಯಮಾನ ನಂದಲ್ಲ ಎಂದು ಖಡಕ್ ಆಗಿ ಹೇಳಿದರು.

ಇದು ಬೇಕಂತಲೇ ಮಾಡಿರುವ ವಿಡೊಯೋ.  ಮಿಮಿಕ್ರಿಯಲ್ಲಿ ಏನು ಬೇಕಾದ್ರೂ ಮಾಡಬಹುದು. ಹೀಗಾಗಿ ಇದನ್ನ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಹೆಚ್.ವಿಶ್ವನಾಥ್ ಹೇಳಿದರು.

ಹಾಗೆಯೇ ರಾಜೀನಾಮೆ ವಿಚಾರದಲ್ಲಿ ನಮ್ಮ ನಿರ್ಧಾರ ಅಚಲ. ರಾಮಲಿಂಗೆರಡ್ಡಿ ಅವರೂ ರಾಜೀನಾಮೆ ವಾಪಸ್ ಪಡೆಯಲ್ಲ. ಸದ್ಯ ಬೆಂಗಳೂರಿಗೆ ಬರುವ ನಿರ್ಧಾರ ಮಾಡಿಲ್ಲ ಎಂದು ತಿಳಿಸಿದರು.

ಇನ್ನು ಹಣ ಪಡೆದು ಬಿಜೆಪಿಗೆ ಹೋಗ್ತಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಹೆಚ್.ವಿಶ್ವನಾಥ್, ನಾನು ದಲ್ಲಾಳಿಯೂ ಅಲ್ಲ. ವ್ಯಾಪಾರಿಯೂ ಅಲ್ಲ.  ಅಷ್ಟೊಂದು ಹಣ ಎಲ್ಲಿ ಇಟ್ಟಿಕೊಳ್ಳೋದು ಎಂದು ಹೇಳುವ ಮೂಲಕ ಬಿಜೆಪಿ ಅಪರೇಷನ್ ಕಮಲಕ್ಕೆ ಒಳಗಾಗಿಲ್ಲ ಎಂದು ಸ್ಪಷ್ಟಪಡಿಸಿದರು.

Key words: releasing -obscene -audio – fake- H. Vishwanath- clarified.