ಕೋವಿಡ್ ಸಂಕಷ್ಟಕ್ಕೆ ಮಿಡಿದ ಆರ್’ಸಿಬಿ: 45 ಕೋಟಿ ರೂ. ದೇಣಿಗೆ ಘೋಷಣೆ

ಬೆಂಗಳೂರು, ಮೇ 25, 2021 (www.jkustkannada.in): ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಕೋವಿಡ್ ಸಂಕಷ್ಟದಲ್ಲಿರುವವರ ನೆರವಿದೆ ಬಂದಿದೆ.

ಆರ್ಸಿಬಿ ಸಂಸ್ಥೆಯಾಗಿರುವ “ಡಿಯಾಜಿಯೋ’ದ ಎಂಡಿ ಹಾಗೂ ಸಿಇಒ ಆನಂದ್‌ ಕೃಪಾಲು 45 ಕೋಟಿ ರೂ.ಗಳ ದೇಣಿಗೆಯನ್ನು ಕೋವಿಡ್ ಪರಿಹಾರಕ್ಕೆ ನೀಡುವುದಾಗಿ ಘೋಷಿಸಿದ್ದಾರೆ.

ಈ ಸಂಬಂಧ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿರುವ ಆನಂದ್‌ ಕೃಪಾಲು, ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ನೆರವಾವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ ವೈದ್ಯಕೀಯ ಸವಲತ್ತು, ಬೆಡ್‌ ಮತ್ತು ಆಕ್ಸಿಜನ್‌ ಒದಗಿಸಲು ಈ ದೇಣಿಗೆ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇದಕ್ಕೂ ಮೊದಲು ಹೈದರಾಬಾದ್‌ ಫ್ರಾಂಚೈಸಿ 30 ಕೋಟಿ ರೂ. ನೆರವು ನೀಡಿದ್ದರೆ ಕೊಯ್ಲಿ, ಧೋನಿ ಸೇರಿದಂತೆ ಹಲವು ಕ್ರಿಕೆಟಿಗರು ವೈಯಕ್ತಿಕವಾಗಿ ದೇಣಿಗೆ ನೀಡಿದ್ದರು.