ಹೇ ಮಂತ್ರಿಗಳೇ ನಿಂತ್ಕೊಳ್ರಿ: ನಾನು ಈ ಕ್ಷೇತ್ರದ ಸಂಸದ, ನನಗೆ ಪ್ರೋಟಾಕಾಲ್​ ಇಲ್ವಾ?- ಅಶ್ವಥ್ ನಾರಾಯಣ್ ವಿರುದ್ದ ಗುಡುಗಿದ ಡಿ.ಕೆ ಸುರೇಶ್.

ರಾಮನಗರ,ಮಾರ್ಚ್,2,2023(www.justkannada.in): ರಾಮನಗರ ಜಿಲ್ಲಾಸ್ಪತ್ರೆ ಉದ್ಘಾಟನೆ ವೇಳೆ ಜೆಡಿಎಸ್- ಬಿಜೆಪಿ ಕಾರ್ಯಕರ್ತರ ನಡುವಿನ ಗಲಾಟೆ ನೂಕಾಟ ತಳ್ಳಾಟ ನಡೆದಿತ್ತು. ಈ ಮಧ್ಯೆಯೇ  ಸಚಿವ ಅಶ್ವಥ್ ನಾರಾಯಣ್ ಮತ್ತು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ನಡುವೆಯೂ ಮತ್ತೆ ಜಟಾಪಟಿ ನಡೆದಿದೆ.

ಹೌದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಸಚಿವ ಅಶ್ವಥ್ ನಾರಾಯಣ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.  ಮುಖಾಮುಖಿಯಾದ ವೇಳೆ ಸಚಿವ ಅಶ್ವಥ್ ನಾರಾಯಣ್ ವಿರುದ್ದ ಕಿಡಿಕಾರಿದ ಸಂಸದ ಡಿ.ಕೆ ಸುರೇಶ್, ಹೇ ಮಂತ್ರಿಗಳೇ ನಿಂತ್ಕೊಳ್ರೀ, ಏನ್ರೀ ಪ್ರೋಟಾಕಾಲ್​ ಇಲ್ವಾ? ನಾನು ಈ ಕ್ಷೇತ್ರದ ಸಂಸದ, ನನಗೆ ಪ್ರೋಟಾಕಾಲ್​ ಇಲ್ವಾ? ಯಾರೀ ಸಿಇಒ, ಡಿಸಿ?, ಅವರಿಗೆ ಪ್ರೋಟಾಕಾಲ್​ ಗೊತ್ತಿಲ್ವಾ? ನೀವೊಬ್ಬ ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರೋಟಾಕಾಲ್​ ಗೊತ್ತಿಲ್ವಾ? ರಾತ್ರಿ ಆಹ್ವಾನ ಪತ್ರಿಕೆ ಕಳುಹಿಸಿ, ಬೆಳಗ್ಗೆ ಉದ್ಘಾಟನೆ ಮಾಡುವುದಲ್ಲ. ಈ ಜಿಲ್ಲಾಸ್ಪತ್ರೆ ನೀವು ಮಾಡಿದ್ದಲ್ಲ, ನಾವು ಮಾಡಿರುವುದು ಎಂದು ಗುಡುಗಿದರು.

ಈ ವೇಳೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ನಿಮ್ಮನ್ನು ಯಾರು ಬರಬೇಡ ಎಂದಿದ್ದು . ಗಲಾಟೆ ಬೇಡ ಮಾತನಾಡೋಣ ಬನ್ನಿ.  ಕಾರ್ಯಕ್ರಮ ಮಾಡೋಣ ಬನ್ನಿ ಎಂದರು. ಈ ವೇಳೆ ಡಿಕೆ  ಸುರೇಶ್ ಅವರನ್ನ ಅಲ್ಲಿಯೇ ಇದ್ದ ಸಚಿವ ಸುಧಾಕರ್ ಸಮಾಧಾನಪಡಿಸಿದರು.

Key words: Ramanagar-minister- Ashwath narayan-MP-DK suresh