‘ಶ್ರೀಮನ್ನಾರಾಯಣ’ನ ದರ್ಶನಕ್ಕೆ ಮಹಾರಾಷ್ಟ್ರದಲ್ಲಿ ವಿಘ್ನ !

ಬೆಂಗಳೂರು, ಜನವರಿ 03, 2019 (www.justkannada.in):  ಮಹಾರಾಷ್ಟ್ರದಲ್ಲಿ ಶ್ರೀಮನ್ನಾರಾಯಣ ಸಿನಿಮಾ ಯಶಸ್ಸಿ ಪ್ರದರ್ಶನಕ್ಕೆ ಗಡಿ ವಿವಾದ ತೊಡಕಾಗಿದೆ.

ಶ್ರೀಮನ್ನಾರಾಯಣ ಸಿನಿಮಾ ಪ್ರದರ್ಶನಕ್ಕೆ ಶಿವಸೇನಾ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ. ಹೀಗಾಗಿ ಸಿನಿಮಾದ ಕಲೆಕ್ಷನ್ಗೆ ಭಾರೀ ಪೆಟ್ಟು ಬೀಳುತ್ತದೆ.

ಬಾಕ್ಸ್ ಆಫೀಸ್ನಲ್ಲಿ ನಾಗಾಲೋಕ ಮುಂದುವರೆಸಿರೋ ಅವನೇ ಶ್ರೀಮನ್ನಾರಾಯಣನಿಗೆ ಮಹಾ ಮೋಸ ಆಗ್ತಿದೆ.
ಮರಾಠಿ ಭಾಷೆಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಾರ್ಹ ಅಂಶ ಈ ಸಿನಿಮಾದಲ್ಲಿ ಇಲ್ಲ. ಹೀಗಿದ್ದರೂ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಹಲವೆಡೆ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಉಂಟು ಮಾಡಲಾಗಿದೆ.