ರಾಜಾಹುಲಿ ಅಂತಾ ಬಿರುದು ಕೊಟ್ಟ ಮೇಲೆ ಅದಕ್ಕೆ ತಕ್ಕಂತೆ ಕೆಲಸ ಮಾಡಲಿ- ಸಿಎಂ ಬಿಎಸ್ ವೈಗೆ ಟಾಂಗ್ ಕೊಟ್ಟ ದಿನೇಶ್ ಗುಂಡೂರಾವ್….

ಬೆಂಗಳೂರು,ಸೆಪ್ಟಂಬರ್ ,3,2020(www.justkannada.in): ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿದಿದೆ. ರಾಜ್ಯ ಬಿಜೆಪಿ ಸರ್ಕಾರ ಈಗ ಸಾಲಸೋಲ ಮಾಡಿದೆ. ಹೀಗಾಗಿ ರಾಜಾಹುಲಿ ಅಂತಾ ಬಿರುದು  ಕೊಟ್ಟ ಮೇಲೆ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಟಾಂಗ್ ನೀಡಿದರು.jk-logo-justkannada-logo

ಮಾಧ್ಯಮದ ಜತೆ ಇಂದು ಮಾತನಾಡಿದ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಎಲ್ಲಾ ವಿಚಾರದಲ್ಲೂ ರಾಜಾಹುಲಿಯಾಗಿರಬೇಕು. ಬರೀ ರಾಜಾ ಇಲಿಯಾದರೇ ಪ್ರಯೋಜವಿಲ್ಲ. ಈಗಾಗಲೇ ಸರ್ಕಾರ ಸಾಲಸೋಲ ಮಾಡಿದೆ. ಈ ನಡುವೆ ಕೇಂದ್ರದ ಮುಂದು ಮಾತನಾಡುವ ಧೈರ್ಯವಿಲ್ಲ. ಹೀಗೆ ಏನು ಮಾಡದೆ ಕೈಕಟ್ಟಿ ಕುಳಿತರೇ ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಲಿದೆ. ಹೀಗಾಗಿ ರಾಜಾಹುಲಿ ಹೆಸರಿಗೆ ತಕ್ಕಂತೆ ಕೆಲಸ ಮಾಡಬೇಕು ಎಂದರು.rajahuli-title-cm-bs-yeddyurappa-congress-mla-dinesh-gundurao

ಡ್ರಗ್ಸ್ ದಂಧೆಯಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಅನ್ನೋದು ಗೊತ್ತಾಗಬೇಕು. ಅವರ ಮಕ್ಕಳು ಇವರ ಮಕ್ಕಳು , ನಟ ನಟಿಯರು ಅಂತಿಲ್ಲ. ಪ್ರಚಾರದ ಹೊರತಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.  ಇಡೀ ದೇಶದಲ್ಲಿ ಡ್ರಗ್ಸ್ ದಂಧೆ ಹಬ್ಬಿದೆ. ಯಾರು ಸಪ್ಲೈ ಮಾಡುತ್ತಾರೆ ವಿತರಣೆ ಮಾಡುತ್ತಾರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು  ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದರು.

Key words: Rajahuli -title -CM BS Yeddyurappa- congress- MLA- Dinesh Gundurao