ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಧೃವನಾರಾಯಣ್, ರಾಮಲಿಂಗರೆಡ್ಡಿ ನೇಮಕ: ಎಚ್.ಎ ವೆಂಕಟೇಶ್ ಹರ್ಷ….

ಮೈಸೂರು,ಜನವರಿ,20,2021(www.justkannada.in): ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಕಾರ್ಯಾಧ್ಯಕ್ಷರಾಗಿ ಆರ್.ಧೃವನಾರಾಯಣ್ ಹಾಗು ರಾಮಲಿಂಗರೆಡ್ಡಿ ಅವರನ್ನು ನೇಮಕ ಮಾಡಿರುವುದಕ್ಕೆ ಕೆಪಿಸಿಸಿ ವಕ್ತಾರ ಎಚ್ ಎ ವೆಂಕಟೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.r-dhruvanarayan-ramalinga-reddy-appointed-president-ha-venkatesh

ಧೃವನಾರಾಯಣ್ ನೇಮಕ ಪಕ್ಷದ ಬಲವರ್ಧನೆಗೆ ಸಹಕಾರಿ ಹಾಗೂ ಕಾಂಗ್ರೆಸ್ ಪಕ್ಷ ಶೋಷಿತರನ್ನು ಕೈಬಿಡುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ಅವರು ತಿಳಿಸಿದ್ದಾರೆ. ಶಾಸಕರಾಗಿ, ಸಂಸದರಾಗಿ ಉತ್ತಮ ಸೇವೆ ಸಲ್ಲಿಸಿರುವ ಧೃವನಾರಾಯಣ್ ಅವರ ಅನುಭವ ಪಕ್ಷದ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದು ವೆಂಕಟೇಶ್ ಅಭಿಪ್ರಾಯ ಪಟ್ಟಿದ್ದಾರೆ.r-dhruvanarayan-ramalinga-reddy-appointed-president-ha-venkatesh

ಮತ್ತೊಬ್ಬ ಕಾರ್ಯಾಧ್ಯಕ್ಷರಾಗಿ ನೇಮಕವಾಗಿರುವ ರಾಮಲಿಂಗ ರೆಡ್ಡಿ ನೇಮಕ ವನ್ನು ಅವರು ಸ್ವಾಗತಿಸಿದ್ದಾರೆ.

Key words: R.Dhruvanarayan- Ramalinga Reddy- appointed – President- HA Venkatesh