ಪಿಎಸ್ ಐ ಮರುಪರೀಕ್ಷೆ ಆದೇಶ ವಾಪಸ್ ಗೆ ಆಗ್ರಹಿಸಿ ಪ್ರತಿಭಟನೆ: ಸಿಎಂ ಬೊಮ್ಮಾಯಿ ಭೇಟಿ.

ಬೆಂಗಳೂರು,ಮೇ,28,2022(www.justkannada.in): 545 ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುಪರೀಕ್ಷೆ ಆದೇಶ ವಾಪಸ್ ಗೆ ಆಗ್ರಹಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.

ನಗರದ ಪ್ರೀಡಂ ಪಾರ್ಕ್ ನಲ್ಲಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಮನವಿ ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಅವರು, ಪಿಎಸ್ ಐ ಅಕ್ರಮದ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಮುಗಿಯುವವರೆಗೂ ಯಾವುದೇ ಭರವಸೆ ನೀಡಲಾಗಲ್ಲ ತನಿಖೆ ಮುಗಿರುಯವವರ ತಾಳ್ಮೆಯಿಂದ ವರ್ತಿಸಬೇಕು.  ನೀವು ನೀಡಿದ ಮನವಿ ಪತ್ರ ಪರಿಶೀಲನೆ  ನಡೆಸುತ್ತೇನೆ ಎಂದರು.

Key words: PSI-scam-protest-CM Bommai-visit