ಹಗರಣದಲ್ಲಿ ಭಾಗಿಯಾಗಿದ್ರೆ ನನ್ನನ್ನ ಅರೆಸ್ಟ್ ಮಾಡಿ- ಶಾಸಕ ಪ್ರಿಯಾಂಕ್ ಖರ್ಗೆ ಸವಾಲು.

ಬೆಂಗಳೂರು,ಮೇ,5,2022(www.justkannada.in):  ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ 3 ಬಾರಿ ನೋಟಿಸ್ ನೀಡಿದ ಹಿನ್ನೆಲೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಶಾಸಕ ಪ್ರಿಯಾಂಕ್ ಖರ್ಗೆ, ಸರ್ಕಾರಕ್ಕೆ ಭಯಬಿದ್ದು ಸಿಐಡಿ ನೋಟಿಸ್ ನೀಡುತ್ತಿದೆ. ಹೈಕಮಾಂಡ್ ಹೇಳಿದರೆ ಹಾಜರಾಗುತ್ತೇನೆ. ಪ್ರಕರಣ ಸಂಬಂಧ ಸಿಐಡಿಗೆ ಆಡಿಯೋ ತಲುಪಿಸುವ ಕೆಲಸ ಮಾಡುತ್ತೇನೆ.  ಆಡಿಯೋ ಮತ್ತು ಪತ್ರಿಕೆ ತಲುಪಿಸುತ್ತೇನೆ ಎಂದರು.

ಪಿಎಸ್ ಐ ಬಗ್ಗೆ ಸುದ್ದಿಗೋಷ್ಠಿ ನಂತರ ಬೆದರಿಕೆ ಬಂದಿದೆ.   ನನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ ಎಂದು ದೂರು ನೀಡಿದ್ದೆ.  ಹಗರಣದಲ್ಲಿ ಭಾಗಿಯಾಗಿದ್ರೆ ನನ್ನನ್ನ ಅರೆಸ್ಟ್ ಮಾಡಿ ಎಂದು ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಸವಾಲ್ ಹಾಕಿದರು.

Key words: psi- scam- involve-arrest-MLA-Priyank Kharge.