ರಾಮನಗರ ಕ್ಷೇತ್ರದಿಂದ ಡಿ.ಕೆ ಸುರೇಶ್ ಸ್ಪರ್ಧೆ ಬಗ್ಗೆ ಪ್ರಸ್ತಾಪವಿದೆ: ತೀರ್ಮಾನಿಸಿಲ್ಲ- ಡಿ.ಕೆ ಶಿವಕುಮಾರ್.

kannada t-shirts

ಬೆಂಗಳೂರು,ಮಾರ್ಚ್,14,2023(www.justkannada.in): ರಾಮನಗರ ಕ್ಷೇತ್ರದಿಂದ ಡಿ.ಕೆ ಸುರೇಶ್ ಸ್ಪರ್ಧೆ ಬಗ್ಗೆ ಪ್ರಸ್ತಾಪವಿದೆ. ಆದರೆ ನಾವು ಯಾವುದೇ ತೀರ್ಮಾನಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್,  ಡಿಕೆ ಸುರೇಶ್ ಸ್ಪರ್ಧೆ ಬಗ್ಎಗ ಹೈಕಮಂಡ್ ನಿಂದ ಒತ್ತಡ  ಬಂದಿದ್ದು ನಿಜ. ಪಾರ್ಟಿ ಹೇಳುತ್ತಿದೆ. ಆದರೆ ನಾವಿನ್ನೂ ತೀರ್ಮಾನ ಮಾಡಿಲ್ಲ ಎಂದರು.

ಈ ಹಿಂದೆಯೂ ಡಿಕೆ ಸುರೇಶ್ ಸ್ಪರ್ಧೆಗೆ ಕಾರ್ಯಕರ್ತರು ಒತ್ತಾಯ ಮಾಡಿದ್ದರು. ಆದರೆ ಮತ್ತೆ ಬೈಎಲೆಕ್ಷನ್ ಎಲ್ಲಾ ಮಾಡುವುದಕ್ಕೆ ಇಷ್ಟಿವಿಲ್ಲ. ಸ್ಪರ್ಧೆಗೆ ಡಿಕೆ ಸುರೇಶ್ ಅರ್ಜಿ ಹಾಕಿಲ್ಲ. ಚರ್ಚೆಯೂ ಮಾಡಿಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

Key words: proposal -DK Suresh -contest -Ramanagara -Constituency – DK Shivakumar.

website developers in mysore