ಕೊಡಗಿನ ನಿಸರ್ಗಧಾಮದಲ್ಲಿ ಅಡ್ಡಾಡಿದ ಪ್ರಿಯಾ ವಾರಿಯರ್

ಮಡಿಕೇರಿ, ಆಗಸ್ಟ್ 28, 2019 (www.justkannada.in): ನಟಿ ಯಾ ವಾರಿಯರ್ ಇತ್ತೀಚೆಗೆ ಕೊಡಗಿನ ನಿಸರ್ಗಧಾಮಕ್ಕೆ ಭೇಟಿ ನೀಡಿದ್ದರು.

ನೆರೆ ಪ್ರವಾಹದ ಗುಂಗಿನಿಂದ ಪ್ರವಾಸಿಗರನ್ನು ಹೊರತರಲು ಕುಶಾಲನಗರದ ನಿಸರ್ಗಧಾಮ ಕೇಂದ್ರ ನೀಡಿದ್ದ ಆಹ್ವಾನದ ಹಿನ್ನೆಲೆಯಲ್ಲಿ ಅವರು ಇಲ್ಲಿಗೆ ಭೇಟಿ ನೀಡಿದ್ದರು.

ಈ ವೇಳೆ ಅಭಿಮಾನಿಗಳು ಪ್ರಿಯಾ ಜತೆ ಸೆಲ್ಫಿ ತೆಗೆಸಿಕೊಂಡು ಖುಷಿಪಟ್ಟರು. ಜತೆಗೆ ಮಾತನಾಡಿದ ಅವರು, ‘ಹಿಂದಿ, ತೆಲುಗು ಹಾಗೂ ಕನ್ನಡ ಚಿತ್ರದಲ್ಲಿ ಸಿನಿಮಾ ಮಾಡುತ್ತಿದ್ದೇನೆ. ಅಭಿಮಾನಿಗಳು ಅಡಾರ್ ಲವ್ ಮಲಯಾಳಂ ಚಿತ್ರಕ್ಕೆ ನೀಡಿದ ಬೆಂಬಲವನ್ನು ಮುಂದಿನ ಸಿನಿಮಾಗಳಿಗೂ ನೀಡುವಂತೆ ಕೋರಿದರು.