ಮಾಜಿ ಸಿಎಂ ಸಿದ್ಧರಾಮಯ್ಯರನ್ನ ಭೇಟಿಯಾದ ಪ್ರಣವಾನಂದ ಸ್ವಾಮೀಜಿ.

ಬೆಂಗಳೂರು,ಮೇ,15,2023(www.justkannada.in): ರಾಜ್ಯ ವಿಧಾನಸಭಾ ಚುನವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿದ್ದು ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗಿದೆ. ಸಿಎಂ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ಧರಾಮಯ್ಯ ನಡುವೆ ಪೈಪೋಟಿ ಇದ್ದು, ಹೈಕಮಾಂಡ್ ಗೆ ತಲೆನೋವು ಶುರುವಾಗಿದೆ.

ಈ ಮಧ್ಯೆ ಮಾಜಿ ಸಿಎಂ ಸಿದ್ಧರಾಮಯ್ಯರನ್ನ  ಪ್ರಣವಾನಂದ ಸ್ವಾಮೀಜಿ ಭೇಟಿಯಾಗಿ ತಮ್ಮ ಸಮುದಾಯಕ್ಕೆ ಉನ್ನತ ಸ್ಥಾನವನ್ನ ನೀಡುವಂತೆ ಮನವಿ ಮಾಡಿದ್ದಾರೆ.

ಸಿದ್ಧರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಪ್ರಣವಾನಂದ ಸ್ವಾಮೀಜಿ ಕೆಲ ಕಾಲ ಚರ್ಚಿಸಿದ್ದಾರೆ.  ನಮ್ಮ ಈಡಿಗ ಸಮುದಾಯಕ್ಕೆ 7 ಟಿಕೆಟ್ ನೀಡಿದ್ದರು.  ಸಂಪುಟದಲ್ಲಿ ನಮ್ಮ ಸಮದಾಯದವರಿಗೆ ಉನ್ನತ ಸ್ಥಾನ ನೀಡಬೇಕು ಎಂದು  ಪ್ರಣಾವನಂದ ಸ್ವಾಮಿಜಿ ಆಗ್ರಹಿಸಿದ್ದಾರೆ.

Key words: Pranavananda Swamiji -met -former CM- Siddaramaiah.