ಅಧಿಕಾರಕ್ಕೆ ಬಂದ್ರೆ 10 ಕೆ.ಜಿ‌. ಅಕ್ಕಿ ಕೊಡ್ತೀನಿ ಎಂದ ಸಿದ್ದರಾಮಯ್ಯ ವಿರುದ್ಧ ಎಂಎಲ್ ಸಿ ಹೆಚ್.ವಿಶ್ವನಾಥ್ ವಾಗ್ದಾಳಿ…

ಮೈಸೂರು,ಫೆಬ್ರವರಿ,20,2021(www.justkannada.in): ಅಧಿಕಾರಕ್ಕೆ ಬಂದ್ರೆ 10 ಕೆ.ಜಿ‌. ಅಕ್ಕಿ ಕೊಡ್ತೀನಿ ಎಂದು ಹೇಳಿಕೆ ನೀಡಿರುವ  ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಂಎಲ್ ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.jk

ಈ  ಹೇಳಿಕೆ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಎಂಎಲ್ ಸಿ ಹೆಚ್.ವಿಶ್ವನಾಥ್,  ಅಕ್ಕಿ ಕೊಡ್ತೀನಿ ಅನ್ನೋದೆ ನಿಮ್ಮ ಆಡಳಿತನಾ..? ಇದನ್ನ ಆಡಳಿತ ಅಂತಾ ಹೆಳ್ತಾರಾ. ಸರ್ಕಾರಿ ಹಣದ ವೆಚ್ಚಕ್ಕೆ ಎಲ್ಲೂ ಕಡಿವಾಣ ಇಲ್ಲ. 6.5 ಕೋಟಿ ಜನರಲ್ಲಿ‌4.35 ಲಕ್ಷ ಜನ ಬಿಪಿಎಲ್ ನಲ್ಲಿ ಕವರ್ ಆಗಿದ್ದಾರೆ. 1.27 ಲಕ್ಷ ಬಿ‌ಪಿಎಲ್ ಕಾರ್ಡ್ ಇದೆ‌. 85% ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ‌‌.  ಅಂದ್ರೆ ಕರ್ನಾಟಕ ರಾಜ್ಯ ಯಾವ ಅಭಿವೃದ್ಧಿ ಪಥದಲ್ಲಿ ಇದೆ ಸಿದ್ದರಾಮಯ್ಯ. ಇದನ್ನು ಯಾರು ಕೇಳುವವರಿಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಅದೆಷ್ಟೋ ಜನ ಕಾಳು ಸಂತೆಕೋರರು ಕ್ಯೊಟ್ಯಾಧಿಪತಿ ಆಗಿದ್ದಾರೆ‌. ಬರಿ ನ್ಯಾಯಬೆಲೆ ಅಂಗಡಿಗೆ ಹೆಸರಿಗೆ ಮಾತ್ರ  ಅನ್ನುವಂತಾಗಿದೆ. ಎಲ್ಲಿಯೂ ಅಧಿಕಾರಿಗಳು ಪರಿಶೀಲನೆ ಮಾಡಿಲ್ಲ‌. ನೀವು ಸುಮ್ಮನೆ ಅಕ್ಕಿ ಕೊಡ್ತೀನಿ ಅಂದ್ರೆ ಇದೇನು ಆಡಳಿತ ಅಂತಾರಾ ಎಂದು ಹೆಚ್.ವಿಶ್ವನಾಥ್ ಕಿಡಿಕಾರಿದರು. power- 10 kg-rice- MLC H Vishwanath-  against-former cm- Siddaramaiah

ನಿಮ್ಮ ದರ್ಪ, ದಕ್ಷತೆಯ ಆಡಳಿತ ಅಲ್ಲ.ದುರಹಂಕಾರ ದುರಾಡಳಿತ ಆಗುತ್ತದೆ. ದರ್ಪ ದುರಹಂಕಾರದಿಂದಲೇ ಸಿದ್ದರಾಮಯ್ಯ 130 ರಿಂದ 70 ರಷ್ಟು ಸೀಟ್ ಗೆ ಬಂದಿದ್ದಾರೆ ಎಂದು ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ದೇವರಾಜ ಅರಸು ಅವರಿಗಿಂತ ದೊಡ್ಡ ಆಡಳಿತಗಾರನಾ ನೀವು‌..?

ನಾನು ನಾನು ಅನ್ನೋ ದುರಹಂಕಾರ, ದರ್ಪ ನಿಮ್ಮನ್ನ ಎಲ್ಲಿಗೆ ತಗೊಂಡು ಹೋಗಿದೆ‌. ನಾನೇ ಮುಖ್ಯಮಂತ್ರಿ ನಾನೇ ಆಗ್ತೀನಿ ಅಂತಾರೆ. ಇನ್ನೂ 2.5. ವರ್ಷ ಇದೆ, ಜನರು ಯಾರಿಗೆ ಆಶೀರ್ವಾದ ಮಾಡ್ತಾರೆ ಯಾರಿಗೆ ಗೊತ್ತು. ಸುಮ್ಮನೆ ಯಾಕೆ ಬೊಂಬಡ ಹಿಡ್ಕೊತೀರಿ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಅವರ ಕಾಲದಲ್ಲಿ ಕುರುಬರಿಗೆ ಆದ ಅನ್ಯಾಯ ಯಾವಾಗಲೂ ಆಗಿಲ್ಲ. ಕೊನೆಯಲ್ಲಿ ಸಿಕ್ಕ ಸಿಕ್ಕದ್ದಕ್ಕೆ ಹಣ ಕೊಟ್ಟು ಹೋದ್ರು. ನಿಮಗೆ ಗೊತ್ತಿತ್ತು ನೀವು ವಾಪಸ್ ಬರೋದಿಲ್ಲ ಅಂತಾ. ಯಾಂದಳ್ಳಿಯ ಇಂಜಿನಿಯರಿಂಗ್ ಕಾಲೇಜಿಗೆ ದುಡ್ಡು ಕೊಟ್ರ. ದೇವರಾಜ ಅರಸು ಅವರಿಗಿಂತ ದೊಡ್ಡ ಆಡಳಿತಗಾರನಾ ನೀವು‌..? ಎಂದು ಸಿದ್ಧರಾಮಯ್ಯಗೆ ಹೆಚ್.ವಿಶ್ವನಾಥ್ ಕುಟುಕಿದರು.

 

Key words: power- 10 kg-rice- MLC H Vishwanath-  against-former cm- Siddaramaiah