ಬಿಜೆಪಿಗರ ಹೃದಯದಲ್ಲಿ ವಿಷ ಇದೆ: ಹಿಂದೂ ಧರ್ಮ ಬಿಟ್ಟು ಬೇರೇನು ಇರಬಾರದೆಂಬ ಭಾವನೆ ಅವರದ್ದು – ಮಾಜಿ ಸಂಸದ ಆರ್ ಧ್ರುವನಾರಾಯಣ್ ವಾಗ್ದಾಳಿ…

ಮೈಸೂರು,ಡಿ,28,2019(www.justkannada.in): ಮಾಜಿ ಸಚಿವ ಡಿಕೆ ಶಿವಕುಮಾರ್ ಏಸುಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾಳತ್ವ ವಹಿಸಿರುವ ಕುರಿತು ಟೀಕೆ ವ್ಯಕ್ತಪಡಿಸಿರುವ ಬಿಜೆಪಿ ನಾಯಕರ ವಿರುದ್ದ ಮಾಜಿ ಸಂಸದ ಆರ್.ಧೃವನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್.ಧೃವನಾರಾಯಣ್, ಬಿಜೆಪಿಗರ ಹೃದಯದಲ್ಲಿ ವಿಷ ಇದೆ. ಕ್ರಿಶ್ಚಿಯನ್ನರ ಭಾವನೆಗಳಿಗೆ ಬೆಲೆ‌‌ ಕೊಡದ ಬಿಜೆಪಿಯವರ ಹೇಳಿಕೆಗಳು ಅಕ್ಷಮ್ಯ ಅಪರಾಧ. ಮೃಗಗಳಿಗೆ ಮಾನವೀಯತೆ ಇರುತ್ತೆ. ಆದ್ರೆ ಬಿಜೆಪಿ‌ ನಾಯಕರಿಗೆ ಮಾನವೀಯತೆ ಇಲ್ಲ. ಇವರೇಲ್ಲ ಮನುಷ್ಯರ ? ಬಿಜೆಪಿಯವರ ಮನಸ್ಸಿಲ್ಲಿ ಎಂಥ ವಿಷ ಇದೆ ಅಂತ ಇದರಲ್ಲೆ ಗೊತ್ತಾಗುತ್ತೆ . ಹಿಂದೂ ಧರ್ಮ ಬಿಟ್ಟು ಬೇರೇನು ಇರಬಾರದೆಂಬ ಭಾವನೆ ಅವರದ್ದು ಎಂದು ಕಿಡಿಕಾರಿದರು.

ಡಿಕೆಶಿ ಟೀಕಿಸುವ ಪ್ರತಾಪ್‌ಸಿಂಹ ಮಂಗಳೂರಿನಲ್ಲಿ ಓದಿದ ಕಾಲೇಜು ಯಾವುದು..? ಆರ್.ಧೃವನಾರಾಯಣ್ ಟಾಂಗ್..

ಸ್ಥಳೀಯ ಜನರ ಮನವಿಗೆ ಸ್ಪಂದಿಸೋದು ಶಾಸಕರ ಕರ್ತವ್ಯ. ಅದಕ್ಕಾಗಿ ಡಿಕೆಶಿ ಅದಕ್ಕೆ ಸರ್ಕಾರದಿಂದ ಜಾಗ ಕೊಡಿಸಿ ತಾವು ಹಣ ನೀಡಿದ್ದಾರೆ. ಇದನ್ನ‌ ಬಿಜೆಪಿ ನಾಯಕರು ಟೀಕಿಸೋದು ಸರಿಯಲ್ಲ. ಕ್ತೈಸ್ತ ಮಿಷನರಿಗಳು ಸ್ವಾತಂತ್ರ್ಯ ಪೂರ್ವ‌ದಿಂದಲೂ ಸೇವೆ ಮಾಡುತ್ತಿವೆ. ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೆ ಕೊಡುಗೆ ನೀಡಿದೆ. ಅಂತ ಸಮುದಾಯವನ್ನ ಧರ್ಮವನ್ನ ಅವಮಾನಿಸೋದು ಸರಿಯಲ್ಲ. ಅದೇಷ್ಟು ಬಿಜೆಪಿ ನಾಯಕರು ಅವರ ಮಕ್ಕಳು ಕ್ರೈಸ್ತ ಮಿಷನರಿ ಶಾಲೆಯಲ್ಲಿ ಓದಿಲ್ಲ. ಡಿಕೆಶಿ ಟೀಕಿಸುವ ಪ್ರತಾಪ್‌ಸಿಂಹ ಮಂಗಳೂರಿನಲ್ಲಿ ಓದಿದ ಕಾಲೇಜು ಯಾವುದು ಎಂದು ಟಾಂಗ್ ನೀಡಿದರು.

ಇವೇಲ್ಲ ಕ್ರೈಸ್ತ ಸಮುದಾಯವನ್ನ ಅವಮಾನಿಸಿದ್ದಾರೆ. ಇದಕ್ಕೆ ಸೋನಿಯಾ ಗಾಂಧಿ ಹೆಸರು ತಳುಕು ಹಾಕೋದು ಸರಿಯಲ್ಲ. ಸಿಎಎ ಕಾಯ್ದೆಯನ್ನು ಧರ್ಮಾಧಾರಿತವಾಗಿ ಜಾರಿ ಮಾಡ್ತಿದ್ದಾರೆ. ಈಗ ಕ್ರೀಶ್ಚಿಯನ್ನರ ಭಾವನೆಗಳಿಗೆ ಬೆಲೆ ಕೊಡ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನು ಮಾಡಲು ಹೋಗ್ತಿವೆ. ಆ ಈಶ್ವರಪ್ಪನವರಿಗಂತು ಮನುಷ್ಯತ್ವವೇ ಇಲ್ಲ ಬಿಡಿ. ಅವರು ಕ್ರೀಶ್ವಿಯನ್ನರಿಗೆ ನೋವಾಗುವ ಮಾತುಗಳನ್ನೆ ಆಡಿರೋದು ಎಷ್ಟು ಸರಿ ಎಂದು ಆರ್ ಧೃವನಾರಾಯಣ್ ಹರಿಹಾಯ್ದರು.

ಹಿಂದೂಧರ್ಮದಲ್ಲಿರುವ ಅಸಮಾನತೆ ಬಗ್ಗೆ ತಮ್ಮ‌ ನಿಲುವು ಹೇಳಲಿ…..

ಬಿಜೆಪಿಯವರದ್ದು ದಮನಕಾರಿ ಮನಸ್ಥಿತಿ. ಹಿಂದು ಧರ್ಮ ಬಿಟ್ಟು ಬೇರೆ ಏನು ಇರಬಾರದು ಅನ್ನೋ ಭಾವನೆ ಇಟ್ಟುಕೊಂಡಿದ್ದಾರೆ. ಇವರ ಮೂಲ ಅಜೆಂಡಾ ಪ್ರಚೋದನಕಾರಿ ಮೂಲಕ ಮತ ಸೆಳೆಯೋದು. ಬಿಜೆಪಿಯವರು ಮೊದಲು ಅಸೃಶ್ಯತೆ ಬಗ್ಗೆ ಮಾತನಾಡಲಿ. ಹಿಂದೂಧರ್ಮದಲ್ಲಿರುವ ಅಸಮಾನತೆ ಬಗ್ಗೆ ತಮ್ಮ‌ ನಿಲುವು ಹೇಳಲಿ. ಆ ಈಶ್ವರಪ್ಪ ಅಂತು ಎಲ್ಲರಿಗು ಅವಮಾನ ಮಾಡ್ತಿದ್ದಾರೆ.ಒಬ್ಬ ಮಂತ್ರಿಯಾಗಿ ಹೇಗೆ ಇರಬೇಕು ಎಂಬುದೆ ಆ ಮನುಷ್ಯನಿಗೆ ಗೊತ್ತಿಲ್ಲ ಎಂದು ಆರ್.ಧೃವನಾರಾಯಣ್ ಗುಡುಗಿದರು.

ಧರ್ಮದ ಮಧ್ಯ ಕಂದಕ ಸೃಷ್ಟಿಸುವುದೆ ಇವರ ಕೆಲಸ.

ನಾನು ಶಾಸಕನಾಗಿದ್ದಾಗ ಸಿ.ಟಿ.ರವಿ ನನಗೆ ಹೇಳುತ್ತಿದ್ದರು. ಯಾಕೆ ಶಾಲೆ ಕಾಲೇಜಿನ ಫೈಲ್ ತರ್ತಿರಾ. ಅದನ್ಯಾಕೆ ಮಾಡೋಕೆ ಹೋಗ್ತಿರಿ. ನಾವು ನೋಡು ವರ್ಷಕ್ಕೊಮ್ಮೆ ದತ್ತ ಪೀಠ ಮೆರವಣಿಗೆ ಮಾಡಿ ಗೆದ್ದು ಬರ್ತಿವಿ ನೀವು ಹಾಗೆ ಮಾಡಿ ಅಂತ ಸಲಹೆ ಕೊಟ್ಟಿದ್ರು. ಇನ್ನು ನಳಿನ್ ಕುಮಾರ್ ಕಟೀಲ್ ಸಂಸತ್ ಗೆ ಬಾರದೆ ಉತ್ಸವದಲ್ಲಿ ಭಾಗಿಯಾಗ್ತಿದ್ರು. ಸಂಸತ್ ಬಿಟ್ಟು ಉತ್ಸವದಲ್ಲಿ ಭಾಗಿಯಾಗ್ತಿರಾ ಅಂತ ಕೇಳೀದ್ರೆ ನಮಗೆ ಸಂಸತ್ ಗಿಂತ ಉತ್ಸವನೆ ಹೆಚ್ಚು ಅಂತ ಹೇಳ್ತಿದ್ರು. ಇಂತಹ ಮನಸ್ಥಿತಿ ಇರುವವಂತವರು ಬಿಜೆಪಿ ನಾಯಕರುಗಳು. ಇವರುಗಳಿಗೆ ಅಭಿವೃದ್ಧಿ ಬೇಡಾ. ಧರ್ಮದ ಮಧ್ಯ ಕಂದಕ ಸೃಷ್ಟಿಸುವುದೆ ಇವರ ಕೆಲಸ ಎಂದು ಚಾಟಿ ಬೀಸಿದರು.

Key words: poison heart – BJP-Christian community –mysore- Former MP- R Dhruvanarayan