ಜನರು ಮತ ಹಾಕ್ತಿರೋದು ಮಂತ್ರಿಗಳಿಗೆ: ಅದ್ದರಿಂದ ನಮ್ಮ ಗೆಲುವು ನಿಶ್ಚಿತ- ಹುಣಸೂರಿನಲ್ಲಿ ಬಿ.ವೈ ವಿಜಯೇಂದ್ರ ಹೇಳಿಕೆ…

ಮೈಸೂರು,ನ,22,2019(www.justkannada.in):  ಜನರು ಮತ ಹಾಕುತ್ತಿರುವುದು ಮಂತ್ರಿಗಳಿಗೆ ಅದ್ದರಿಂದ  ನಮ್ಮ ಗೆಲುವು ನಿಶ್ಚಿತವಾಗಿದೆ ಎಂದು ಸಿಎಂ ಬಿಎಸ್ ವೈ ಪುತ್ರ ಬಿ.ವೈ ವಿಜಯೇಂದ್ರ ನುಡಿದಿದ್ದಾರೆ.

ಹುಣಸೂರು ಉಪಚುನಾವಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಚುನಾವಣಾ ಪ್ರಚಾರಕ್ಕೆ ಬಿ.ವೈ ವಿಜಯೇಂದ್ರ ಇಂದು ಎಂಟ್ರಿ ಕೊಟ್ಟಿದ್ದಾರೆ. ಪ್ರಚಾರದ ವೇಳೆ ಮಾತನಾಡಿದ ಬಿ.ವೈ ವಿಜಯೇಂದ್ರ,  ಕಾಂಗ್ರೆಸ್ ಗೆ ಮತ ಹಾಕಿದರೇ ಏನು ಮಾಡೋಕೆ ಸಾಧ್ಯ..? ಅದ್ದರಿಂದ ಜನರು ಮಂತ್ರಿಗಳಿಗೆ ಮತ ಹಾಕ್ತಿದ್ದಾರೆ. ಹೀಗಾಗಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆ.ಆರ್ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮೇಲೆ ಚಪ್ಪಲಿ ಎಸೆತ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಮುಂದಿನ ದಿನಗಳಲ್ಲಿ ಅವರೇ ಬಂದು ಹೂವಿನ ಹಾರ ಹಾಕುತ್ತಾರೆ. ಕೆ.ಆರ್ ಪೇಟೆಯಲ್ಲಿ ತ್ರಿಕೋನ ಸ್ಪರ್ಧೆ ಇದೆ ಎಂದು ತಿಳಿಸಿದರು.

ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ವಾಪಸ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಅಭ್ಯರ್ಥಿಗಳಿಲ್ಲದ ಕಾರಣ ಸಿಕ್ಕ ಸಿಕ್ಕವರಿಗೆ ಟಿಕೆಟ್ ಕೊಟ್ರು. ಆದ್ರೆ ನಾಮಪತ್ರ ವಾಪಸ್ ಪಡೆದಿದ್ದರಿಂದ ಬಿಜೆಪಿಗೆ ಬಲ ಹೆಚ್ಚಾಗಿದೆ.

Key words: People –vote-ministers-  hunsur- BY Vijayendra