ಪೇ ಸಿಎಂ ಅಭಿಯಾನ: ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿಎಸ್ ವೈ ಕಿಡಿ.

kannada t-shirts

ಶಿವಮೊಗ್ಗ,ಸೆಪ್ಟಂಬರ್,27,2022(www.justkannada.in): ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ  ಭ್ರಷ್ಟಾಚಾರ ಆರೋಪ ಮಾಡಿ  ಪೇ ಸಿಎಂ ಅಭಿಯಾನ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಗರಂ ಆಗಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿ ಡಿಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ ಮಾಜಿ ಸಿಎಂ ಬಿಎಸ್ ವೈ, ಡಿಕೆಶಿ ಮತ್ತು  ಸಿದ್ಧರಾಮಯ್ಯ ಪೋಸ್ಟರ್ ಅಂಟಿಸಿದ್ದಾರೆ. ಅವರ ವಿರುದ್ಧ ಕೇಸ ಆಗಲಿ.  ಪೊಸ್ಟರ್ ಅಂಟಿಸೋದು ಕಾಂಗ್ರೆಸ್ ಗೆ ಶೋಭೆ ತರಲ್ಲ ಎಂದು ಕಿಡಿಕಾರಿದರು.

ಪಿಎಫ್ ಐ ಮುಖಂಡರ ಮೇಲೆ ಪೊಲೀಸ್ ದಾಳಿ ಕುರಿತು ಪ್ರತಿಕ್ರಿಯಿಸಿದ ಬಿಎಸ್ ವೈ, ರಾಜ್ಯಾದ್ಯಂತ 40ಕ್ಕೂ ಹೆಚ್ಚು ಕಡೆ ದಾಳಿ ನಡೆಸಲಾಗಿದೆ. ಪಿಎಫ್ ಐ ಮುಖಂಡರನ್ನ ವಶಕ್ಕೆ ಪಡೆಯಲಾಗಿದೆ . ಪಿಎಫ್ ಐ ವಿರುದ್ಧ ಕೇಂದ್ರ ಕ್ರಮ ಕೈಗೊಂಡಿದೆ ಮೊದಲೇ ಪಿಎಫ್ ಐ ನಿಷೇಧಿಸಬೇಕಿತ್ತು.  ತನಿಖೆ ಮಾಡಿದ್ರೆ ದೇಶದ್ರೋಹಿ ಕೆಲಸ ಬಯಲಾಗುತ್ತೆ ಎಂದರು.

Key words: Pay CM- campaign-  Siddaramaiah -DK Shivakumar – BS Yeddyurappa

website developers in mysore