ಪ್ರಯಾಣಿಕರ ಕೀಟಲೆಯಿಂದಾಗಿ ಏಕಾಏಕಿ ಅಟ್ಟಿಸಿಕೊಂಡು ಬಂದ ಆನೆ..! ಮುಂದೇನಾಯ್ತು..?

ಚಾಮರಾಜನಗರ,ಜು,11,2019(www.justkannada.in): ತನ್ನ ಮರಿಯೊಂದಿಗೆ ರಸ್ತೆ ದಾಟುತಿದ್ದ ಆನೆಗಳಿಗೆ ಪ್ರಯಾಣಿಕರು ಕೀಟಲೆ ಮಾಡಿದ ಹಿನ್ನೆಲೆ ಸಿಟ್ಟಿಗೆದ್ದ ಕಾಡಾನೆ ಪ್ರಯಾಣಿಕರನ್ನ ಅಟ್ಟಿಸಿಕೊಂಡು ಬಂದ ಘಟನೆ ಚಾಮರಾಜನಗರ – ಸತ್ಯಮಂಗಲ ರಸ್ತೆಯ ಪುನಜನೂರು ಬಳಿ ನಡೆದಿದೆ.

ಕಾಡಾನೆ ತನ್ನ ಮರಿಯೊಂದಿಗೆ ರಸ್ತೆ ದಾಟುತಿದ್ದ  ವೇಳೆ ಪ್ರಯಾಣಿಕರು ಆನೆಗೆ ಕೀಟಲೆ ಮಾಡಿ ತೊಂದರೆ ಕೊಟ್ಟಿದ್ದಾರೆ. ಈ ವೇಳೆ ಪ್ರಯಾಣಿಕರ ಮೇಲೆ ಆನೆ ದಾಳಿಗೆ ಮುಂದಾಗಿದ್ದು ಏಕಾ ಏಕಿ ಅಟ್ಟಿಸಿಕೊಂಡು ಬಂದಿದೆ. ಬಳಿಕ ರಸ್ತೆ ಮಧ್ಯೆ ನಿಂತು ಸಂಚಾರಕ್ಕೆ ಅಡ್ಡಿ ಮಾಡಿವೆ.

ಈ ನಡುವೆ ಆನೆ ದಾಳಿಯಿಂದ ಪ್ರಯಾಣಿಕರು ಜಸ್ಟ್ ಮಿಸ್ ಆಗಿದ್ದು ಆಗುವ ಅನಾಹುತದಿಂದ ಪಾರಾಗಿದ್ದಾರೆ. ಇನ್ನು ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಆನೆಗಳನ್ನ ಅರಣ್ಯದ ಕಡೆಗೆ ಅಟ್ಟಿದ್ದಾರೆ.

Key words: Passenger-tease- Elephant-attack-chamarajanagar