ಆಕ್ಸಿಜನ್ ಕೊರತೆಯಿಂದ ಕೇವಲ ಮೂವರು ಮಾತ್ರ ಸಾವು-ಆರೋಗ್ಯ ಸಚಿವ ಡಾ.ಕೆ. ಸುಧಾಕರ್…..

ಬೆಂಗಳೂರು,ಮೇ,3,2021(www.justkannada.in): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಪ್ರಕರಣ ಸಂಬಂಧ ಅಧಿಕಾರಿಗಳ ಮಾಹಿತಿ ಪ್ರಕಾರ ಆಕ್ಸಿಜನ್ ಕೊರತೆಯಿಂದ ಕೇವಲ ಮೂರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.jk

ಇಂದು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ  ಆರೋಗ್ಯ ಸಚಿವ ಸುಧಾಕರ್, ಚಾಮರಾಜನಗರದಲ್ಲಿ    24 ಗಂಟೆಗಳಲ್ಲೇ 24 ಮಂದಿ ಕೋವಿಡ್ ಗೆ ಸಾವಿಗೀಡಾಗಿರುವುದು ನಮಗೆ ಆಘಾತ ತಂದಿದೆ. ಮೊದಲು ಅವರಿಗೆ ಸದ್ಗತಿ ಸಿಗಲಿ. ಮೃತರ ಕುಟುಂಬಗಳ ಜೊತೆ ಸರ್ಕಾರ ಇರುತ್ತದೆ. ಈ ಕುಟುಂಬಗಳಿಗೆ ಪರಿಹಾರ ವಿಚಾರ ಸಿಎಂ ಹೇಳುತ್ತಾರೆ ಎಂದು ತಿಳಿಸಿದರು.

ರಾತ್ರಿ 12 ಗಂಟೆ ತನಕ ಆಮ್ಲಜನಕ‌ ಡ್ರೈ ಆಗಿರಲಿಲ್ಲ. ಈ ಬಗ್ಗೆ ನಾನು ತಾಂತ್ರಿಕವಾಗಿ ಏನು ಹೇಳಲ್ಲ. ಈ ಬಗ್ಗೆ ಸಮಗ್ರ ತನಿಖೆಯಾಗಿ ಸತ್ಯಾಂಶ ಹೊರ ಬರಲಿ. ನಮ್ಮ ಹೇಳಿಕೆ‌ ತನಿಖೆಗೆ ಅಡ್ಡಿ ಆಗಬಾರದು. ನಿನ್ನೆ ಬೆಳಗ್ಗೆ 7 ಗಂಟೆಯಿಂದ ಮಧ್ಯರಾತ್ರಿವರೆಗೆ 14 ಜನರು ಸಾವನ್ನಪ್ಪಿದ್ದಾರೆ. ಇವರು ಕೋವಿಡ್​ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ 12 ರಿಂದ ಬೆಳಗ್ಗೆ 3ಗಂಟೆವರೆಗೆ 3 ಸಾವನ್ನಪ್ಪಿದ್ದು, ಮುಂಜಾನೆ 3 ರಿಂದ 7ರವರೆಗೆ 7 ಜನ ಸಾವನ್ನಪ್ಪಿದ್ದು, 24 ಗಂಟೆಯಲ್ಲಿ ಒಟ್ಟು 23 ಜನರು ಸಾವಿಗೀಡಾಗಿದ್ದಾರೆ ಎಂದು ಸಚಿವ ಸುಧಾಕರ್ ತಿಳಿಸಿದರು. oxygen-chamarajanagar-death-  case-Health Minister -Dr.K. sudhakar

123 ಮಂದಿ ಕೋವಿಡ್ ನಿಂದ ಚಿಕಿತ್ಸೆ ದಾಖಲಾಗಿದ್ದಾರೆ. 16 ಮಂದಿ ವೆಂಟಿಲೇಟರ್ ನಲ್ಲಿದ್ದು, 36 ಮಂದಿ ಎನ್.ಯು. ನಲ್ಲಿದ್ದಾರೆ. ಇನ್ನೂ ಕೆಲವರು ಕಡಿಮೆ ಆಮ್ಲಜನಕದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ ಸಚಿವ ಸುಧಾಕರ್, ಈ ದುರ್ಘಟನೆ ನನಗೆ ವೈಯಕ್ತಿಕವಾಗಿ ಒಬ್ಬ ವೈದ್ಯನಾಗಿ ಅತೀವ ದು:ಖ ತಂದಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಲಿ. ರಾಜ್ಯಕ್ಕೆ 850 ಟನ್ ಆಮ್ಲಜನಕ ಹಂಚಿಕೆಯಾಗಿದೆ. ಈ ಹಿಂದೆ 300 ಟನ್ ಮಾತ್ರ ಸಿಗುತ್ತಿತ್ತು. ಸಿಎಂ‌‌ ಕೇಂದ್ರದ ಮೇಲೆ‌ ಒತ್ತಡ ತಂದು ಅಮ್ಲಜನಕ ಹೆಚ್ಚುವರಿ‌ ಪೂರೈಕೆ ಮಾಡಿಸಿದ್ದಾರೆ ಎಂದು ಸುಧಾಕರ್ ತಿಳಿಸಿದರು.

Key words: oxygen-chamarajanagar-death-  case-Health Minister -Dr.K. sudhakar