ಬಿಜೆಪಿ ಚಡ್ಡಿ ಸಂಗ್ರಹ ಅಭಿಯಾನಕ್ಕೆ ಅಕ್ರೋಶ: ಇದು ಬಿಜೆಪಿ ಅವರ ಅಟೆಂಷನ್ ಡೈವರ್ಟ್ ಸ್ಟ್ಯಾಟಿಕ್ಸ್–ಶಾಸಕ ಪ್ರಿಯಾಂಕ್ ಖರ್ಗೆ ಕಿಡಿ.

 

ಮೈಸೂರು,ಜೂನ್,11,2022(www.justkannada.in): ಚಡ್ಡಿ ಸಂಗ್ರಹ ಅಭಿಯಾನ ನಡೆಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕ  ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಬಿಜೆಪಿ ಅವರ ಅಟೆಂಷನ್ ಡೈವರ್ಟ್ ಸ್ಟ್ಯಾಟಿಕ್ಸ್. ಇದನ್ನ ಮೆಚ್ಚಬೇಕು ಎಂದು ಕಿಡಿಕಾರಿದರು.

ಮೈಸೂರಿನಲ್ಲಿ ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಆರ್ ಎಸ್ ಎಸ್ ಚಡ್ಡಿ ಸುಟ್ಟರೇ ಬಿಜೆಪಿ ಬುಡಕ್ಕೆ ಯಾಕೆ ಬೆಂಕಿ ಹತ್ತಿತು ಗೊತ್ತಿಲ್ಲ.  ಬಿಜೆಪಿಯವರು ಹೆಚ್ಚು ರಿಯಾಕ್ಟ್ ಮಾಡ್ತಾ ಇದ್ದಾರೆ. ಆರ್ ಎಸ್ ಎಸ್ ಸಿದ್ದಾಂತವನ್ನ ಬೆಳಯಲಿಕ್ಕೆ ಬಿಡಲ್ಲ ಅಂತ ಸಂದೇಶ ಕಳುಹಿಸಲು ಚಡ್ಡಿ ಸುಟ್ಟಿದ್ದು. ಆದರೆ ಬಣ್ಣ ಬಣ್ಣದ ಚಡ್ಡಿ ಸಂಗ್ರಹ ಅಭಿಯಾನ ಮಾಡ್ತಾ ಇದೀರಿ. ಬಳಸಿರೊ ಬಣ್ಣದ ಚಡ್ಡಿ ಕಾಂಗ್ರೆಸ್ ಕಚೇರಿಗೆ ಕಳುಹಿಸುತ್ತಿದ್ದೀರಿ. ಆರ್ ಎಸ್ ಎಸ್ ಬಡ್ಡಿ ಅಂದ್ರೆ ಖಾಕಿ ಚೆಡ್ಡಿ. ಅದನ್ನ ನಿಮಗೆ ಕೊಡ್ತೇವೆ. ಮೋದಿಗೆ ವಾಪಾಸ್ ಕಳುಹಿಸಿಕೊಡ್ತೇವೆ.

ಚಡ್ಡಿ ಸಂಗ್ರಹ ಅಭಿಯಾನವನ್ನ ಎಸ್.ಸಿ ಎಸ್.ಟಿ ಮೋರ್ಚಾದವರಿಂದ ಮಾಡಿಸ್ತಾ ಇದ್ದಾರೆ. ಯಾಕೆ ಅದು ಎಸ್ ಸಿ ಎಸ್ ಟಿ ಮೋರ್ಚಾ ದಿಂದಾನೇ ಮಾಡಿಸಬೇಕು. ಬಿಜೆಪಿ ಅಭಿಯಾನ ಯಾಕೆ ಮಾಡಲಿಲ್ಲ. ಬಳಸಿರೊ ಚಡ್ಡಿ ಮಲ ಹೊತ್ತಂಗೆ ಹೊತ್ಕೊ ಹೋಗ್ತಾರೆ. ಮನುಸ್ಮೃತಿ ಸಂಸ್ಕೃತಿ  ಇನ್ನೂ ಹೋಗಿಲ್ಲ. ಬೊಮ್ಮಯಿಂದ ಹಿಡಿದು ಎಲ್ಲರೂ ಚಡ್ಡಿ ಸಂಗ್ರಹ ಅಭಿಯಾನ ಮಾಡಿ. ಎಸ್ ಸಿ, ಎಸ್ ಟಿ ಗೆ ಮಾತ್ರ ಸೀಮಿತ ಮಾಡಬೇಡಿ. ಸಂವಿಧಾನ ತಳ್ಳಾಕಿ ಬಳಸಿರುವ  ಚಡ್ಡಿ ತಲೆ ಮೇಲೆ ಹಾಕೊಂಡು ಓಡಾಡ್ತಾ ಇದೀರಲ್ಲ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

7 ಸಾವಿರ ಕೋಟಿ ಎಸ್ ಸಿಪಿ, ಟಿಎಸ್ ಪಿ ಹಣ ದುರ್ಬಳಕೆ ಆದಾಗ ನಿಮ್ಮ ರಕ್ತ ಕುದಿಯಲಿಲ್ವಾ..?

7 ಸಾವಿರ ಕೋಟಿ ಎಸ್ ಸಿಪಿ, ಟಿಎಸ್ ಪಿ ಹಣ ದುರ್ಬಳಕೆ ಆದಾಗ ನಿಮ್ಮ ರಕ್ತ ಕುದಿಯಲಿಲ್ವಾ..? ಬೋರ್ ವೆಲ್ ಹಗರಣ ಆದಾಗ ನಿಮ್ಮ ರಕ್ತ ಕುದಿಯಲಿಲ್ಲವಾ..? ನಿಮ್ಮ ಆರ್ಥಿಕ ಪ್ರಗತಿ ಶೂನ್ಯ. ಗಂಗಾಕಲ್ಯಾಣ ಯೋಜನೆ ಹಣ ದುರ್ಬಳಕೆ ಆದಾಗ ರಕ್ತ ಕುದಿಯಲಿಲ್ಲವೇ..? ಐರಾವತ ಯೋಜನೆಗೆ 5 ಲಕ್ಷ ಗ್ರ್ಯಾಂಟ್ ಮಾಡಿದ್ದೆ.  ಈಗ 50 ಸಾವಿರ ಮಾತ್ರ ಲೋನ್ ಮಾಡಿದ್ದೀರಿ. ಸಂವೃದ್ಧಿ ಯೋಜನೆ ತಂದು 10 ಲಕ್ಷ ಅನುದಾನ ನೀಡಿದ್ವಿ. ನೀವು ಏನು ಮಾಡುದ್ದೀರಿ. ದಲಿತರು ಅಲ್ಪಸಂಖ್ಯಾತರ ಮೇಲೆ ಎಷ್ಟು ಅತ್ಯಾಚಾರ ನಡೆಯುತ್ತಿದೆ. ನಿಮಗೆ ಮಾಹಿತಿ ಬೇಕಾ..? ಎಂದು ಪ್ರಿಯಾಂಕ್ ಖರ್ಗೆ ಗುಡುಗಿದರು.

ವಿದ್ಯಾರ್ಥಿಗಳು ಭವಿಷ್ಯ ಹಾಳು ಮಾಡಲು ಹೊರಟವರ ವಿರುದ್ಧ ಪ್ರತಿಭಟನೆ ಮಾಡಿದ್ರೆ ಬಂಧಿಸುತ್ತೀರಿ. ಮತ್ತೆ ಮನುವಾದ ಕಡೆ ಹೋಗ್ತಾ ಇದೀರಾ. ಡಾ. ಬಾಬ ಸಾಹೇಬ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿಯೇ ಇಲ್ಲ ಅಂತೀರಾ. ಬಸವಣ್ಣ, ಸಿದ್ದಗಂಗ ಶ್ರೀಗಳು , ತೀರ್ಥಂಕರ ವಿಚಾರ ಕಟ್ ಮಾಡ್ತೀರಾ. ಬಾಡಿಗೆ ಭಾಷಣಕಾರ  ಸೂಲಿಬೆಲೆ ಪಾಠ ನಾವು ಕಲಿಬೇಕಾ.? ಸ್ವಯಂ ಘೋಷಿತ ತತ್ವಜ್ಞಾನಿಗಳು ಅವರು. ಯಾವು ಆಧಾರದ ಮೇಲೆ ಸಮಿತಿ ರಚನೆ ಆಗಿದೆ ಅನ್ನೋದೆ ಗೊತ್ತಿಲ್ಲ. ಒಂದು ಕೋಟಿ ವಿದ್ಯಾರ್ಥಿಗಳು ಭವಿಷ್ಯದ ಜೊತೆ ಚಲ್ಲಾಟ ಆಡ್ತಾ ಇದಾರೆ. ಬೊಮ್ಮಾಯಿ ಹೀಗೆ ಇರಲಿಲ್ಲ. ಅವರನ್ನ ನಾನು ನೋಡಿದ್ದೇನೆ. ಖುರ್ಚಿ ಆಸೆಗೆ ಎಲ್ಲವನ್ನು ಬಿಟ್ಟುಬಿಟ್ರು. ಕೂರು ಅಂದ್ರೆ ಕೂರ್ತಾರೆ ಹೋಗು ಅದ್ರೆ ಹೋಗುತ್ತಾರೆ ಎಂದು ಹರಿಹಾಯ್ದರು.

ಮೊದಲು ಕಾಂಗ್ರೆಸ್ ನಾಯಕರ ವಿರುದ್ಧ ಮಾತಾನಾಡುವುದು ಬಿಡಿ. ಕೆಲಸ ಮಾಡಿ. ಜನ ನಿಮ್ಮ ಮುಖದ ಮೇಲೆ ಉಗಿತಾರೆ ಹೋಗಿ. ಕೋಮದ ವಿಷ ಬೀಜ ಬಿತ್ತುವ ಕೆಲಸ ಮಾಡ್ತಾ ಇದ್ದಾರೆ. ಚಿಲ್ಲರೆ ರಾಜಕೀಯ ಬಿಟ್ಟು ವಿದ್ಯಾರ್ಥಿಗಳ ಭವಿಷ್ಯದತ್ತ ಗಮನ ಕೊಡಿ. ಮಕ್ಕಳಿಗೆ ಸಾಕ್ಸ್ ಶೂ, ಪಠ್ಯಪುಸ್ತಕ, ಸಮವಸ್ತ್ರ ಇಲ್ಲ. ಅದರ ಬಗ್ಗೆ ಗಮನ ಕೊಡಿ ಸ್ವಾಮಿ. ಮಕ್ಕಳ ಭವಿಷ್ಯ ಹಾಳಾದ್ರೆ ಅದನ್ನ ಸುಧಾರಣೆ ಮಾಡೋದು ಕಷ್ಟ. ಹೊಸ ಪಠ್ಯ ಪುಸ್ತಕ ಬಿಟ್ಟು ಹಳೆಯ ಪಠ್ಯ ಕ್ರಮ ಮುಂದುವರೆಸಿ. ಸರಿಯಾದ ಸಮಿತಿ ರಚನೆ ಮಾಡಿ ಪರಿಷ್ಕರಣೆ ಮಾಡಿ ಎಂದು ಪ್ರಿಯಾಂಕ್ ಖರ್ಗೆ ಸಲಹೆ ನೀಡಿದರು.

ಆರ್ ಎಸ್ ಎಸ್ ಬಗ್ಗೆ ಪ್ರತ್ಯೇಕ ಪುಸ್ತಕವನ್ನೆ ತಗೋ ಬನ್ನಿ ನಾವು ಬೇಡ ಅನ್ನೊಲ್ಲ.

ಆರ್ ಎಸ್ ಎಸ್ ಬಗ್ಗೆ ಪ್ರತ್ಯೇಕ ಪುಸ್ತಕವನ್ನೆ ತಗೋ ಬನ್ನಿ ನಾವು ಬೇಡ ಅನ್ನೊಲ್ಲ. ಆದ್ರೆ ಅದರಲ್ಲಿ ಸತ್ಯಾಂಶ ಹೇಳಬೇಕು. ಇತಿಹಾಸದಲ್ಲಿ ಏನಾಗಿದೆ ಅದನ್ನ ಹೇಳಿ. 52 ವರ್ಷ ನಿಮ್ಮ ಕಚೇರಿಯಲ್ಲಿ ಯಾಕೆ ರಾಷ್ಟ್ರ ಧ್ವಜ ಹಾರಿಸಲಿಲ್ಲ..? ಹೆಗಡೆವಾರ್  ಭಾಷಣ ಯಥಾವತ್ ಹಾಕಬೇಕು. ರಾಷ್ಟ್ರ ಧ್ವಜದ ಬಗ್ಗೆ ಅವರಿಗೆ ಏನು ಅನಿಸಿಕೆ ಇತ್ತು..? ಯಾಕೆ ನೀವು ಗಾಂಧಿ ಕೊಂದ್ರಿ..? ಕ್ಬಿಟ್ ಇಂಡಿಯಾ ಚಳುವಳಿ ನೀವು ಎಲ್ಲಿದ್ರಿ..? ವೀರ್ ಸಾವರ್ಕರ್ ವೀರ್ ಅಂತ ಬಿರುದು ಕೊಟ್ಟಿದ್ದು ಯಾರು..? ಇದೆಲ್ಲವನ್ನು ಪಠ್ಯ ಪುಸ್ತಕ ಮಾಡಿ. ಆದ್ರೆ ಸತ್ಯಾಂಶ ಇರಬೇಕು. ನಾವು ದೇಶ ದ್ರೋಹಿಗಳಾ ನೀವು ದೇಶ ದ್ರೋಹಿಗಳಾ ಎಂದು ಜನ ಆಮೇಲೆ ತೀರ್ಪು ಕೊಡಲಿ ಎಂದರು.

Key words:  outrage – BJP- campaign-MLA-Priyank Kharge-mysore