ಮಾಧ್ಯಮಗಳ ಮೇಲೆ ಗರಂ ಆದ ಸ್ಪೀಕರ್ ರಮೇಶ್ ಕುಮಾರ್ …

kannada t-shirts

ಬೆಂಗಳೂರು,ಜು,6,2019(www.justkannada.in): ಮೈತ್ರಿ ಸರ್ಕಾರದ ವಿರುದ್ದ ಬೇಸರಗೊಂಡು ರಾಜೀನಾಮೆ ನೀಡಲು ಅತೃಪ್ತ ಶಾಸಕರು ಸ್ಪೀಕರ್ ಕಚೇರಿಗೆ ಆಗಮಿಸಿದ್ದ ವೇಳೆ ಸ್ಪೀಕರ್ ರಮೇಶ್ ಕುಮಾರ್ ಅಲ್ಲಿ ಇರಲಿಲ್ಲ. ಹೌದು, ಅತೃಪ್ತ ಶಾಸಕರು ಆಗಮಿಸುವ ಮುನ್ನವೇ ಸ್ಪೀಕರ್ ರಮೇಶ್ ಕುಮಾರ್ ಕಚೇರಿಯಿಂದ ತೆರಳಿದ್ದರು. ಆದರೆ ಇದೀಗ ಸ್ಪೀಕರ್ ರಮೇಶ್ ಕುಮಾರ್ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಹೌದು, ಅತೃಪ್ತ ಶಾಸಕರು ಕಚೇರಿಗೆ ಆಗಮಿಸುವ ಮುನ್ನ ಅಲ್ಲಿಂದ ತೆರಳಿದ್ದ ಸ್ಪೀಕರ್ ರಮೇಶ್ ಕುಮಾರ್ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯವನ್ನ ವಿಚಾರಿಸಿದ್ದಾರೆ.

ಜಯದೇವ ಆಸ್ಪತ್ರೆಗೆ ಆಗಮಿಸಿದ್ದ ವೇಳೆ ಮಾಧ್ಯಮಗಳು ಪ್ರತಿಕ್ರಿಯೆ ಕೇಳಲು ಮುಂದಾದಾಗ ಸ್ಪೀಕರ್ ರಮೇಶ್ ಕುಮಾರ್ ಮಾಧ್ಯಮಗಳ ಮೇಲೆ ಗರಂ ಆದ ಘಟನೆ ನಡೆಯಿತು.  ಮೈತ್ರಿ ಸರ್ಕಾರದ ವಿರದ್ದ ಸಿಡಿದೆದ್ದ ಅತೃಪ್ತ ಶಾಸಕರು ಇಂದು ರಾಜೀನಾಮೆ ಸಲ್ಲಿಸಲು ಸ್ಪೀಕರ್ ಕಚೇರಿಗೆ ತೆರಳಿದ್ದರು. ಆದರೆ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ  ಸ್ಪೀಕರ್ ರಮೇಶ್ ಕುಮಾರ್  ಎರಡು ದಿನ ರಜೆ ಮೇಲೆ ತೆರಳಿದ್ದಾರೆಎಂಬ ಮಾಹಿತಿ ಲಭ್ಯವಾಗಿದೆ.

Key words:  outrage-against-media-  Speaker -Ramesh Kumar

website developers in mysore