ಸರ್ಕಾರ ರಚನೆ ವೇಳೆ ನನಗೂ ಆಫರ್ ಬಂದಿತ್ತು: ಹೋಗಿದ್ರೆ ಈಗ ಮಂತ್ರಿಯಾಗ್ತಿದ್ದೆ- ಕಾಂಗ್ರೆಸ್ ಶಾಸಕ ಹೊಸ ಬಾಂಬ್.

ಹೊಸಪೇಟೆ,ಆಗಸ್ಟ್,16,2021(www.justkannada.in):  ಬಿಎಸ್ ವೈ ಸರ್ಕಾರ ರಚನೆಯಾಗುವಾಗ ನನಗೂ ಕರೆ ಬಂದಿತ್ತು.  ಕರೆ ಬಂದಾಗ ಹೋಗಿದ್ದರೇ ನಾನು ಈಗ ಸಚಿವನಾಗುತ್ತಿದ್ದೆ ಎಂದು ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಹೊಸ ಬಾಂಬ್ ಸಿಡಿಸಿದ್ದಾರೆ.

ಹೊಸಪೇಟೆಯಲ್ಲಿ ಈ ಬಗ್ಗೆ ಮಾತನಾಡಿದ ಶಾಸಕ ಭೀಮಾನಾಯ್ಕ್,  ಬಿಎಸ್ ವೈ ಸರ್ಕಾರ ರಚೆನೆಯಾಗುವ ಸಂರ್ಧಭದಲ್ಲಿ ನನಗೂ ಕರೆ ಬಂದಿತ್ತು. ಬಿಜೆಪಿಗೆ ಬಂದ್ರೆ ಮಂತ್ರಿ ಮಾಡುವುದಾಗಿ ಆಫರ್ ಬಂದಿತ್ತು. ಒಂದು ವೇಳೆ ಅಲ್ಲಿಗೆ ಹೋಗಿದ್ದರೆ ಈಗ ನಾನು ಕೂಡ ಸಚಿವನಾಗುತ್ತಿದೆ. ಆದರೆ ನಾನು ಹಾಗೆ ಮಾಡಲಿಲ್ಲ. ಸಿದ್ಧರಾಮಯ್ಯಗೆ ಮೋಸ ಮಾಡಲು ನಮಗೆ ಮನಸ್ಸು ಬರಲಿಲ್ಲ ಎಂದರು.

2013- 2018ರ ವರೆಗೆ ಜೆಡಿಎಸ್ ಶಾಸಕನಾಗಿದ್ದರೂ ಸಿದ್ದರಾಮಯ್ಯ ಕೇಳಿದಷ್ಟು ಅನುದಾನ ಕೊಟ್ಟಿದ್ದರು. ನನ್ನನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದಿದ್ದೇ ಸಿದ್ದರಾಮಯ್ಯ. ಹಾಗಾಗಿ ಬೇರೆಯವರು ಪಕ್ಷ ತೊರೆದರೂ ನನಗೆ ನನಗೆ ಹೋಗೋ ಮನಸ್ಸಾಗಲಿಲ್ಲ ಎಂದು ಭೀಮಾನಾಯ್ಕ್ ತಿಳಿಸಿದರು.

Key words: offered – government structure-BJP-minister-Congress –MLA- Bhimanaik