ಬೆಳಗಾವಿಯಲ್ಲಿ ಅಧಿವೇಶನ ನಡೆಸದ ಹಿನ್ನೆಲೆ: ಅಧಿವೇಶನದಲ್ಲಿ ‘ಕೈ’ ಶಾಸಕರಿಂದ ಪ್ರತಿಭಟನೆ

ಬೆಂಗಳೂರು,ಜನವರಿ,28,2021(www.justkannada.in): ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸದ ಹಿನ್ನೆಲೆಯಲ್ಲಿ ವಿಧಾನ ಸಭೆಯ ಜಂಟಿ ಅಧಿವೇಶನದ ರಾಜ್ಯಪಾಲರ ಭಾಷಣದ  ವೇಳೆ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ನಡೆಯಬೇಕಾದ ಅಧಿವೇಶನ 1 1/2 ವಷ೯ದಿಂದ ನಡೆದಿರುವುದಿಲ್ಲ.ಉತ್ತರ ಕರ್ನಾಟಕ‌ ಭಾಗವಾದ ಹುಬಳ್ಳಿ-ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ,‌ ಬೀದರ್, ಇವುಗಳಲ್ಲಿ‌ ಭಾರಿಪ್ರವಾಹ ಮತ್ತು ಬರಗಳಿಗೆ ಕರ್ನಾಟಕ ಸರ್ಕಾರ ಯಾವುದೇ ಅನುದಾನ ಪರಿಹಾರ  ನೀಡಿಲ್ಲ ಎಂದು ಕಾಂಗ್ರೆಸ್ ಶಾಸಕರು ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದರು.not -held – Belgaum-session-Protest -congress

ಹಾಗೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ  ಬೆಳಗಾವಿ ನಮ್ಮದು ಎಂಬ ಹೇಳಿಕೆಗೆ  ಕಾಂಗ್ರೆಸ್ ಶಾಸಕರು ಖಂಡಿಸಿದರು, ಮಹಜನ ವರದಿಯೇ ಅಂತಿಮ ಹಾಗೂ ನಂಜುಂಡಪ್ಪ ವರದಿ ಸಂಪೂರ್ಣ ಜಾರಿಗೆ ಎಂದು ವಿಧಾನ ಪರಿಷತ್ತಿನ ಶಾಸಕರಾದ ಪ್ರಕಾಶ ಕೆ.ರಾಠೋಡ ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿ.ಕೆ.ಹರಿಪ್ರಸಾದ್ , ಮೋಹನ‌ ಕೊಂಡಜ್ಜಿ, ಹರೀಶ್ ಕುಮಾರ್, ಯು.ಬಿ.ವೆಂಕಟೇಶ್ ಉಪಸ್ಥಿತರಿದ್ದರು.

Key words:  not -held – Belgaum-session-Protest -congress