ಮತ್ತೆ ಬಿಎಸ್ ಪಿ ಸೇರುವ ಪ್ರಶ್ನೆಯೇ ಇಲ್ಲ-  ಮಾಜಿ ಸಚಿವ ಎನ್. ಮಹೇಶ್ ಸ್ಪಷ್ಟನೆ…

ಚಾಮರಾಜನಗರ,ನ,6,2019(www.justkannada.in): ಬಿಎಸ್ ಪಿಯಿಂದ ನನ್ನನ್ನ ಉಚ್ಛಾಟಿಸಲಾಗಿದೆ. ಹೀಗಾಗಿ ನಾನು ಮತ್ತೆ ಬಿಎಸ್ ಪಿ ಪಾರ್ಟಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎನ್. ಮಹೇಶ್ ತಿಳಿಸಿದರು.

ಮಾಧ್ಯಮದ ಜತೆ ಮಾತನಾಡಿದ ಕೊಳ್ಳೇಗಾಲ ಶಾಸಕ ಎನ್. ಮಹೇಶ್,  ನನ್ನದು ಸ್ವತಂತ್ರ ಪಕ್ಷ ನಾನು ಮೂರುವರೆ ವರ್ಷಗಳ ಕಾಲ ಸ್ವತಂತ್ರವಾಗಿರುತ್ತೇನೆ. ನಾನೀನ ಸ್ವತಂತ್ರ ಶಾಸಕ, ನನ್ನನ್ನು ಬಿಎಸ್ ಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಮತ್ತೆ ಬಿಎಸ್ ಪಿಗೆ ಸೇರಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.

ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಹೀಗಾಗಿ ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿದ್ದೇನೆ. ಬಿಜೆಪಿ ನಾಯಕರಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದೇನೆ. ಬಿಎಸ್ ಪಿ ಸೇರ್ಪಡೆ ಸಂಬಂಧ ಯಾರ ಜತೆಯೂ ಮಾತನಾಡಿಲ್ಲ. ನನ್ನನ್ನ ಯಾರೂ ಸಂಪರ್ಕಿಸಿಲ್ಲ ಎಂದು ಶಾಸಕ ಎನ್ ಮಹೇಶ್ ತಿಳಿಸಿದ್ದಾರೆ.

ಕಳೆದ ಮೈತ್ರಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಎನ್ .ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಸಮ್ಮಿಶ್ರ ಸರ್ಕಾರದ ಬಹುಮತ ಸಾಬೀತು ಪಡಿಸುವ ವೇಳೆ ಎನ್ . ಮಹೇಶ್ ಗೈರಾಗಿದ್ದರು. ಹೀಗಾಗಿ ಅವರನ್ನ ಬಿಎಸ್ ಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು.

Key words: no question – joining- BSP- again- N. Mahesh -clarified.